ಭಟ್ಕಳದಲ್ಲಿ ತಿಮ್ಮಯ್ಯ ದಾಸರಿಂದ ಸಂಸ್ಥಾಪನೆಗೊoಡ ಶ್ರೀ ಶ್ರೀಧರ ವೀರಮಾತಾ ಪದ್ಮಾವತಿ ದೇವಿಯ ರಥೋತ್ಸವವು ನೂರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿoದ ಸಂಪನ್ನಗೊoಡಿತು. ವರ್ಷಂಪ್ರತಿ ದತ್ತಜಯಂತಿಯoದು ನಡೆಯುವ ಈ ಉತ್ಸವದ ದಿನದಂದು ದೇವಿಯ ಸನ್ನಿಧಿಯಲ್ಲಿ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಮಧ್ಯಾಹ್ನ ಮಹಾಪೂಜೆಯ ನಂತರದಲ್ಲಿ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಪ್ರಸಾದ ಭೋಜನ ನಡೆಯಿತು. ಸಾಯಂಕಾಲ ನಡೆದ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ದೇವಾಲಯದಿಂದ ಪುರಬೀದಿಯಲ್ಲಿ ರಥವನ್ನೇರಿ ಸಾಗಿದ ಪದ್ಮಾವತಿ ದೇವಿಗೆ ಮಾರ್ಗದುದ್ದಕ್ಕೂ ಭಕ್ತಾದಿಗಳು ಅವರ ಮನೆಗಳ ಎದುರು ರಂಗೋಲಿ, ದೀಪಗಳನ್ನಿಟ್ಟು ಹಣ್ಣುಕಾಯಿ, ಆರತಿ ಸಮರ್ಪಿಸಿದರು. ಜೈ ಮಾರುತಿ ಚಂಡೆ ಬಳಗದ ಚಂಡೆ ವಾದ್ಯ ಘೋಷದೊಂದಿಗೆ, ನೂರಾರು ಭಕ್ತರ ಉಪಸ್ಥಿತಿಯಲ್ಲಿ ರಥೋತ್ಸವದ ಮೆರವಣಿಗೆಯು ಸಂಪನ್ನಗೊoಡಿತು.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ