ಭಟ್ಕಳ ತಾಲೂಕಿನ ಗೊರ್ಟೆ ಕ್ರಾಸ್ ಸನಿಹದ ಕಾಡಿನಲ್ಲಿರುವ ಆಳವಾದ ಬಾವಿಯೊಂದರಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ಗೋವನ್ನು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಮೇಲಕ್ಕೆತ್ತಿ ರಕ್ಷಣೆ ಮಾಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಭಟ್ಕಳ ತಾಲೂಕಿನ ಗೊರ್ಟೆ ಕ್ರಾಸ್ ಸನಿಹದ ಕಾಡಿನ ಅಂಚಿನಲ್ಲಿರುವ 35 ಅಡಿಗಳಿಗೂ ಹೆಚ್ಚು ಆಳದ ಬಾವಿಗೆ ಅಕಸ್ಮಾತ್ ಗೋವೊಂದು ಬಿದ್ದಿತ್ತು. ಇದನ್ನು ನೋಡಿದ ಸ್ಥಳೀಯರಾದ ವಸಂತ ನಾಯ್ಕ ಎನ್ನುವವರು ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ದನವನ್ನು ರಕ್ಷಿಸುವಂತೆ ಕೋರಿದ್ದರು. ಅಗ್ನಿಶಾಮಕ ಇನ್ಸಪೆಕ್ಟರ್ ರಮೇಶ ಶೆಟ್ಟಿ ನೇತೃತ್ವದ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ದನವನ್ನು ಹಗ್ಗ ಹಾಗೂ ಹೋಸ್ಗಳ ಸಹಾಯದಿಂದ ಸುರಕ್ಷಿತವಾಗಿ ಮೆಲ್ಕಕ್ಕೆತ್ತಿ ಮಾಲಿಕರಿಗೆ ಹಸ್ತಾಂತರಿಸಿದರು.
More Stories
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು