May 16, 2024

Bhavana Tv

Its Your Channel

ಬಿ.ಎಸ್ಸಿ.ಹಾಗೂ ಬಿ.ಕಾಂ ತೃತೀಯ ಸೆಮಿಸ್ಟರ ಫಲಿತಾಂಶ ಪ್ರಕಟ; ಸಿದ್ಧಾರ್ಥ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ

ಭಟ್ಕಳ: ಸಿದ್ಧಾರ್ಥ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ 2021-22 ರ ಬಿ.ಎಸ್ಸಿ.ಹಾಗೂ ಬಿ.ಕಾಂ ತೃತೀಯ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ಬಿ.ಎಸ್ಸಿ. ಪರೀಕ್ಷೆಯಲ್ಲಿ 91.3% ಹಾಗೂ ಬಿ.ಕಾಂ ಪರೀಕ್ಷೆಯಲ್ಲಿ 100% ಫಲಿತಾಂಶ ಬಂದಿರುತ್ತದೆ.

ಬಿ.ಎಸ್ಸಿ ಪರೀಕ್ಷೆಯಲ್ಲಿ ಕು. ಮಂಜುನಾಥ ಎಲ್. ನಾಯ್ಕ 88.62.%, ಕು ದಿವ್ಯಾ ಎಮ್. ನಾಯ್ಕ 87.62%. ಹಾಗೂ ಕು. ಪ್ರೀತಿ ಜಿ. ಮೊಗೇರ 86.31%.ಅಂಕ ಪಡೆದಿರುತ್ತಾರೆ.

ಬಿ.ಕಾಂ ಪರೀಕ್ಷೆಯಲ್ಲಿ ಕು. ಛಾಯಾ ಕೆ. ಮೊಗೇರ 82.71 %, ಕು. ಜನನಿ ಎಸ್. ದೇವಡಿಗ 81.57% ಹಾಗೂ ಕು. ಚೈತ್ರಾ ಕೆ. ಮೋಗೇರ 81.29% ಅಂಕ ಪಡೆದಿರುತ್ತಾರೆ.

ಸದರಿ ಪರೀಕ್ಷೆಗೆ ಕುಳಿತ ಬಿ.ಎಸ್ಸಿ. 23 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಹಾಗೂ ಬಿ.ಕಾಂ. 12 ವಿದ್ಯಾರ್ಥಿಗಳಲ್ಲಿ 09 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ (ಜisಣiಟಿಛಿಣioಟಿ) ತೇರ್ಗಡೆಹೊಂದಿರುತ್ತಾರೆ.

ವಿದ್ಯಾಥಿüðಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

error: