May 10, 2024

Bhavana Tv

Its Your Channel

ನಲುಗಿದ ಆಕಳು ಕರುವಿಗೆ ಆಪದ್ಬಾಂಧವರಾದ ಹನುಮಾನ ನಗರದ ಚಾಲಕರು

ಭಟ್ಕಳ : ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಾಣ ಭೀತಿಯಿಂದ ನಲುಗಿದ್ದ ಆಕಳು ಕರವನ್ನು ಹನುಮಾನ ನಗರ ಸ್ಥಳೀಯ ಚಾಲಕರು ಆಪದ್ಬಾಂಧವರಾಗಿದ್ದಾರೆ.


ರಾಷ್ಟ್ರೀಯ ಹೆದ್ದಾರಿ ಸಮೀಪದ ಕೋಲಾ ಪ್ಯಾರಡೈಸ್ ಹೋಟೆಲ್ ಕಂಪೌoಡ್ ಒಂದರಲ್ಲಿ ಕೇಲವು ದಿನಗಳ ಹಿಂದೆ ಆಕಳು ಕರು ಒಂದು ಅಪಘಾತವಾಗಿ ಬಿದ್ದಿತ್ತು. ಒಂದು ಕಣ್ಣು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇದ್ದ ಆಕಳು ಕರವನ್ನು ಎಷ್ಟು ಜನರು ನೋಡಿದರೂ ನೋಡದ ಹಾಗೆ ರೀತಿಯಲ್ಲಿ ಹೋಗುತ್ತಿದ್ದರು.
ಇದಕ್ಕೆ ಆಪದ್ಬಾಂಧವರಾಗಿ ಬಂದಿದ್ದ ಹುನುಮಾನ ನಗರದ ನಿವಾಸಿ ಈಶ್ವರ ನಾಯ್ಕ,ವಸಂತ ನಾಯ್ಕ, ಶ್ರೀಧರ ನಾಯ್ಕ, ಹಾಗೂ ಬೆಳ್ನಿಯ ದಿನೇಶ್ ನಾಯ್ಕ,ಬಂದರ ರಾಜೇಶ ನಾಯ್ಕ ಸೇರಿದಂತೆ ಪ್ರಾಣ ಭೀತಿಯಿಂದ ನಲುಗಿದ್ದ ದನಕರುವನ್ನು ರಕ್ಷಿಸಿ ಆಟೋರಿಕ್ಷಾ ಸಹಾಯದಿಂದ ಪಶುವೈದ್ಯ ಬಳಿ ಕರೆತಂದು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ನಂತರ ಬಿಜೆಪಿ ಮುಖಂಡ ಗೋವಿಂದ ನಾಯ್ಕ ಸಹಾಯದಿಂದ ಇಲ್ಲಿನ ಬೈಲೂರು ಮಡಿಕೇರಿಯಲ್ಲಿ ಇರುವ ಶ್ರೀ ಗೋಪಾಲಕೃಷ್ಣ ಗೋಶಾಲೆ ಸಾಗಿಸಿ ಗೋಶಾಲೆ ಮಾಲೀಕರಾದ ವಿಷ್ಣು ನಾಯ್ಕ ಕರವನ್ನು ಆಶ್ರಯ ನೀಡಿದ್ದಾರೆ. ಕರುವೊಂದನ್ನು ರಕ್ಷಿಸಿದ ಇವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

error: