April 28, 2024

Bhavana Tv

Its Your Channel

ದೈಹಿಕ ಮಾನಸಿಕ ಸದೃಡತೆಗೆ ಬೇಕು ಯೋಗ- ಡಾ.ಐ.ಆರ್.ಭಟ್

ಭಟ್ಕಳ:- ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಆರ್.ಎನ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ದಿನೇಶ ಗಾಂವಕರ ರವರು ವಿದ್ಯಾರ್ಥಿಗಳು ಯೋಗದ ಮಹತ್ವವನ್ನು ತಿಳಿದುಕೊಂಡು ಸದೃಡ ಭಾರತಕ್ಕೆ ಸದೃಡ ಯುವಕರಾಗಬೇಕೆಂದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಯಕ್ಷರಕ್ಷೆ (ರಿ) ಮುರುಡೇಶ್ವರದ ಅಧ್ಯಕ್ಷರಾದ ಡಾ.ಐ.ಆರ್.ಭಟ್ ರವರು “ಯೋಗ ಮತ್ತು ಆರೋಗ್ಯ” ದ ಕುರಿತು ಉಪನ್ಯಾಸ ನೀಡಿ, ಕಾಲೇಜಿನವತಿಯಿಂದ ಸನ್ಮಾನ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಸಂಜಯ ಕೆ.ಎಸ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಯೋಗದ ಮಹತ್ವ ಅರಿತು ತಮ್ಮ ಜೀವನದಲ್ಲಿ ಅಳವಡಿಸಬೇಕೆಂದರು. ಕಾರ್ಯಕ್ರಮದಲ್ಲಿ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಮಾಧವ ಪಿ ಗೌರವ ಉಪಸ್ಥಿತಿರಿದ್ದು, ಯೋಜನಾಧಿಕಾರಿಗಳಾದ ಗಣೇಶ ನಾಯ್ಕ ಹಾಜರಿದ್ದರು.ಸಹಯೋಜನಾಧಿಕಾರಿಗಳಾದ ಗಣಪತಿ ಕಾಯ್ಕಿಣಿರವರು ಡಾ.ಐ.ಆರ್.ಭಟ್‌ರ ಸಾಧನೆ ಮತ್ತು ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿದರು ಕು.ಶಿಫಾ ಕಾರ್ಯಕ್ರಮವನ್ನು ನಿರೂಪಿಸಿ. ಕು.ಗ್ಲೋರಿಯಾ ಎಲ್ಲರನ್ನು ಸ್ವಾಗತಿಸಿ, ಕು.ರೇಣುಕಾ ಪ್ರಾರ್ಥನೆಗೈದಳು.

error: