May 15, 2024

Bhavana Tv

Its Your Channel

ಕಸ ವಿಲೇವಾರಿ ಸಮಸ್ಯೆಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ರಸ್ತೆ ತಡೆಯಲು ಯತ್ನ: ತಡೆ ಮಾಡದಂತೆ ಮನವರಿಕೆ ಮಾಡಿದ ಅಧಿಕಾರಿಗಳು

ಭಟ್ಕಳ:ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಕಳೆದ ಹಲವಾರು ವರ್ಷಗಳಿಂದ ಇದರ ಈ ಸಮಸ್ಯೆ ಬಗ್ಗೆ ಕಳೆದ 6 ತಿಂಗಳ ಹಿಂದೆ ಇಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದೆ, ತಾತ್ಕಾಲಿಕವಾಗಿ ಕಸ ತೆಗೆಯಲಾಗಿತಿತ್ತು ಆದರೆ ಸಮಸ್ಯೆಯ ಶಾಶ್ವತ ಪರಿಹಾರ ಇನ್ನು ತನಕ ಸ್ಥಳೀಯ ಆಡಳಿತ ಮಾಡಿಲ್ಲ, ಹಾಗಾಗಿ ಇಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ಸದಸ್ಯರು ಸ್ಥಾನಿಯ ನಾಗರಿಕರ ಜೊತೆ ಸೇರಿ ರಸ್ತೆ ತಡೆಗೆ ಮುಂದಾಗಿದ್ದರು, ಈ ವಿಷಯವನ್ನು ತಿಳಿದ ಕೂಡಲೇ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು ಮತ್ತು 10ದಿನದ ಒಳಗೆ ಸಮಸ್ಯೆ ಬಗೆ ಹರಿಸುವ ಆಶ್ವಾಸನೆ ನೀಡಿದ್ದು, ಪ್ರತಿಭಟನಾಕಾರ ಮನವೊಲಿಸಿ ರಸ್ತೆ ತಡೆ ಮಾಡದಂತೆ ಮನವರಿಕೆ ಮಾಡಿದರು.


ಈ ಸಂದರ್ಭದಲ್ಲಿ:ವೆಲ್ಫೇರ್ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಆಸಿಫ್ ಶೇಕ್ ಜಂಟಿ ಕಾರ್ಯದರ್ಶಿಯಾದ ಅಸ್ಲಾಂ ಶೇಕ್ ಮುಖಂಡರಾದ ಜಬ್ಬಾರ್ ಅಸದಿ ಹಾಗೂ ನಾಗರಿಕರು ಇದ್ದರು

error: