ಭಟ್ಕಳ ತಾಲೂಕಿನ ಸೋಡಿಗದ್ದೆ ಕ್ರಾಸ್ ನ ರಿಕ್ಷಾ ನಿಲ್ದಾಣಕ್ಕೆ ಶಾಸಕ ಸುನೀಲ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ಹೊದಿಕೆ ಹಾಕಿಸಿಕೊಟ್ಟು ಅವರ ನೆರವಿಗೆ ನಿಂತಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಶಾಸಕ ಸುನೀಲ ನಾಯ್ಕ ಈ ಭಾಗದಲ್ಲಿ ಕಾರ್ಯಕ್ರಮಕ್ಕೆ ಬಂದಾಗ ಇಲ್ಲಿನ ಆಟೋ ಚಾಲಕರು ನಿಲ್ದಾಣಕ್ಕೆ ಮೇಲ್ಚಾವಣಿ ಹೊದಿಕೆ ಹಾಕಿಕೊಂಡುವAತೆ ಮನವಿ ಮಾಡಿಕೊಂಡಿದ್ದರು. ಅದರಂತೆ ಇಂದು ನಿಲ್ದಾಣಕ್ಕೆ ಮೇಲ್ಚಾವಣಿ ಹೊದಿಕೆ ಹಾಕಿಕೊಟ್ಟಿದ್ದೇನೆ.ರಿಕ್ಷಾ ನಿಲ್ದಾಣ ಕೇವಲ ನಾಮಕಾವಸ್ಥೆಗೆ ಅಲ್ಲದೆ ರಿಕ್ಷಾ ಚಾಲಕರಿಗೆ ಉಪಯೋಗವಾಗ ಬೇಕು ಎಂದ ಅವರು ಈ ರಿಕ್ಷಾ ನಿಲ್ದಾಣದ ಸ್ಥಳ ಚಿಕ್ಕದಾಗಿರುವುದರಿಂದ ಇದರ ನಿರ್ಮಾಣ ಮಾಡಿಕೊಟ್ಟಿರುವುದು ನನಗೆ ಅಷ್ಟೊಂದು ಸಮಾಧಾನ ತಂದಿಲ್ಲ. ಈ ಸ್ಥಳದಲ್ಲಿ ದೊಡ್ಡ ರಿಕ್ಷಾ ನಿಲ್ದಾಣ ಮಾಡಬೇಕೆಂಬುವುದು ನನ್ನ ಆಸೆಯಾಗಿತ್ತು ಎಂದರು
ರಿಕ್ಷಾ ಚಾಲಕರಿಗೂ ನನಗೂ ಅವಿನಾಭಾವ ಸಂಬAಧವಿದೆ. ಅವರಿಗೆ ಏನಾದರೂ ಸೂರು
ಕಲ್ಪಿಸಿಕೊಡಬೇಕು ಎಂಬ ಚಿಂತನೆ ನನ್ನಲಿದೆ. ಶಾಸಕರ ನಿಧಿ ಹಾಗೂ ಸರ್ಕಾರದಿಂದ ರಿಕ್ಷಾ ನಿಲ್ದಾಣ ಮಾಡಿಕೊಡಲು ಅವಕಾಶವಿದ್ದರು ಸಹ ಸರ್ಕಾರದಿಂದ ಈ ಕೆಲಸ ಮಾಡಿ ಕೊಡಲು ಮುಂದಾಗದೆ. ನನ್ನಿಂದ ರಿಕ್ಷಾ ಚಾಲಕರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ನನ್ನ ವೈಯಕ್ತಿಕ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಡುತ್ತಿದ್ದೇನೆ. ಬಾಲ್ಯದಿಂದಲೂ ಆಟೋ ಚಾಲಕರ ಮೇಲೆ ನನಗೆ ಪ್ರೀತಿ ಇದ್ದ ಕಾರಣ ನಾನು ಶಾಲೆಯಿಂದ ಮನೆಗೆ ಬರುವ ವೇಳೆ ಹಣ ಪಡೆಯದೆ ಅದೆಷ್ಟೋ ಆಟೋ ಚಾಲಕರು ನನ್ನನ್ನು ಮನೆಗೆ ತಲುಪಿಸುತ್ತಿದ್ದರು ಎಂದು ತಮ್ಮ ಬಾಲ್ಯದ ನೆನಪು ಮಾಡಿಕೊಂಡರು.
ಇದಕ್ಕೂ ಪೂರ್ವದಲ್ಲಿ ಶಾಸಕ ಸುನೀಲ ನಾಯ್ಕರನ್ನು ಸರ್ಪನಕಟ್ಟೆ ಕ್ರಾಸ್ ನಿಂದ ಸೋಡಿಗದ್ದೆ ಕ್ರಾಸ್ ತನಕ ಆಟೋ ಚಾಲಕರು ಆಟೋ ರ್ಯಾಲಿ ಮುಖಾಂತರ ಆಟೋ ನಿಲ್ದಾಣಕ್ಕೆ ಕರೆದುಕೊಂಡು ಬಂದರು. ಈ ವೇಳೆ ಖುದ್ದು ಶಾಸಕ ಸುನೀಲ ನಾಯ್ಕ ತಾವೇ ರಿಕ್ಷಾ ಚಲಾಯಿಸಿ ಉಳಿದ ಎಲ್ಲಾ ಆಟೋ ಚಾಲಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಯಲ್ವಡಿಕೌರ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷಿö್ಮÃನಾರಾಯಣ ಮತ್ತು ಸ್ಥಳೀಯ ಆಟೋ ಚಾಲಕರು ಪಕ್ಷದ ಕಾರ್ಯಕರ್ತರು ಆಟೋ ರಿಕ್ಷಾ ಮಾಲಕ ಹಾಗೂ ಚಾಲಕ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಮುಂತಾದವರು ಉಪಸ್ಥಿತರಿದ್ದರು.
More Stories
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ