April 29, 2024

Bhavana Tv

Its Your Channel

ಭಟ್ಕಳದಲ್ಲಿ ಭಾರೀ ಮಳೆ ;ಮನೆಯ ಗೋಡೆಯೊಂದು ಕುಸಿದು ಮಹಿಳೆಯೋರ್ವಳಿಗೆ ಗಾಯ

ಭಟ್ಕಳ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶಿರಾಲಿ ಚಿತ್ರಾಪುರದ ಬಂಡೀಕಾಸಿಯಲ್ಲಿನ ವೆಂಕಟ್ರಮಣ ಅಣ್ಣಪ್ಪ ನಾಯ್ಕ ಎನ್ನುವವರ ಮನೆಯ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ಮಹಿಳೆಯೋರ್ವಳಿಗೆ ಗಾಯವಾಗಿದ್ದು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಕುಂದಾಪುರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ ಘಟನೆ ವರದಿಯಾಗಿದೆ.

ಗಾಯಗೊಂಡ ಮಹಿಳೆಯನ್ನು ಭಾರತಿ ಮಾಸ್ತಪ್ಪ ನಾಯ್ಕ (38) ಎಂದು ಗುರುತಿಸಲಾಗಿದ್ದು ಈಕೆ ತವರು ಮನೆಗೆ ಬಂದಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮಹಿಳೆಯ ಕಾಲಿಗೆ ಪೆಟ್ಟು ತಗುಲಿದ್ದು ಮೂಳೆ ಮುರಿತ ಉಂಟಾಗಿದೆ ಎನ್ನಲಾಗಿದೆ. ಮಹಿಳೆಯನ್ನು ತಕ್ಷಣ ರಕ್ಷಿಸಲಾಗಿದ್ದು ಇತರೇ ಯಾರಿಗೂ ಹಾನಿಯಾಗಿಲ್ಲ ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಗ್ರಾಮ ಲೆಕ್ಕಾಧಿಕಾರಿ ಹೇಮಾ ನಾಯ್ಕ, ಪಂಚಾಯತ್ ಪಿ.ಡಿ.ಒ,ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಮನೆಗೆ ಆದ ಹಾನಿಯನ್ನು ಅಂದಾಜಿಸಿದ್ದಾರೆ.
ಶಿರಾಲಿ-1 ಗ್ರಾಮದ ಈರಮ್ಮ ನಾಯ್ಕ ಎನ್ನುವವರ ಮನೆಯ ಮೇಲೆ ಮರವೊಂದು ಬಿದ್ದು ಹಾನಿಯಾಗಿದ್ದು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಹಾನಿಯನ್ನು ಅಂದಾಜಿಸಿದ್ದಾರೆ. ತಾಲೂಕಿನಲ್ಲಿ ಬುಧವಾರ ಬೆಳಿಗ್ಗೆ ಅಂತ್ಯಗೊAಡ 24 ಗಂಟೆಯಲ್ಲಿ 70 ಮಿ.ಮಿ. ಮಳೆಯಾಗಿದ್ದು ಒಟ್ಟೂ 1618.2 ಮಿ.ಮಿ. ಮಳೆಯಾದಂತಾಗಿದೆ. ತಾಲೂಕಿನಲ್ಲಿ ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ಶಾಲಾ, ಕಾಲೇಜುಗಳಿಗೆ ರಜೆ ಸಾರಲಾಗಿದ್ದು ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಬುಧವಾರ ಬೆಳಿಗ್ಗೆಯಿಂದ ಮಳೆ ಸ್ವಲ್ಪ ಬಿಡುವು ನೀಡಿದ್ದು ಮಧ್ಯಾಹ್ನದ ನಂತರ ಮತ್ತೆ ಮಳೆ ಚುರುಕುಗೊಂಡಿದೆ,

error: