ಭಟ್ಕಳ: ಮುರ್ಡೇಶ್ವರ ಲಾಡ್ಜ್ ಒಂದರಲ್ಲಿ ವೇಶ್ಯವಾಟಿಕೆ ದಂದೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿಯನ್ನು ತಿಳಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ ಹಾಗೂ ಮುರ್ಡೇಶ್ವರ ಠಾಣೆ ಪಿ.ಎಸೈ ಪರಮಾನಂದ ಕೊಣ್ಣೂರು ನೇತೃತ್ವ ದಲ್ಲಿ ಶಿವಕೃಪಾ ಲಾಡ್ಜ್ ಮೇಲೆ ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ವೇಶ್ಯವಾಟಿಕೆ ದಂದೆಯ ನಡೆಸುತ್ತಿದ್ದ ಆರೋಪಿಗಳಾದ ನಾಗರಾಜ ಮಂಜುನಾಥ ಮೊಗೇರ,ಮಂಕಿ ನಿವಾಸಿ
ಮತ್ತು ಮಯೂರ ಸುರೇಶ ಮುರ್ಡೇಶ್ವರ, ಮಾವಳ್ಳಿ- 2 ನಿವಾಸಿ ಇಬ್ಬರನ್ನು ಬಂದಿಸಿದ್ದು ಹಾಗೂ ಇನ್ನೂ ಉಳಿದ ಆರೋಪಿ ಕಟ್ಟಡ ಮಾಲಿಕ ಶಿವಪ್ರಸಾದ ರಾಮರಾವ್, ಮುರ್ಡೇಶ್ವರ ಮಾವಳ್ಳಿ-2,ನಿವಾಸಿ ತಲೆ ಮರೆಯಿಸಿ ಕೊಂಡಿದ್ದಾನೆ. ಈ ಮೂರು ಜನ ಸೇರಿ ಬೆಂಗಳೂರ ಹಾಗೂ,ಹಾಸನ ಮೂಲದ 28 ಮತ್ತು 34 ವರ್ಷದ ಇಬ್ಬರು ಮಹಿಳೆರನ್ನು ಶಿವಕೃಪಾ ಲಾಡ್ಜ್ಬಗೆ ಕರೆತಂದು ವೇಶ್ಯವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದ್ದು ಗಿರಾಕಿಗಳಿಂದ ಬಂದ ಹಣವನ್ನು ಪಡೆದುಕೊಂಡು ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದು ದಾಳಿ ನಡೆಸಿದ ಪೊಲೀಸರು ಇಬ್ಬರು ರಕ್ಷಣೆ ಮಾಡಿ ಕಾರವಾರ ಮಹಿಳಾ ಸಾಂತ್ವನ ಕೆಂದ್ರಕ್ಕೆ ಕಳಿಸಿದ್ದಾರೆ. ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ