May 16, 2024

Bhavana Tv

Its Your Channel

ಶ್ರೀ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘ ಶಾಖೆ ಉದ್ಘಾಟಿಸಿದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ: ಶ್ರೀ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘ, ಭಟ್ಕಳ ಇದರ ಶಾಖೆಯನ್ನು ಶಿರಾಲಿಯ ಪತಂಜಲಿ ಕಾಂಪ್ಲೆಕ್ಸನಲ್ಲಿ ಶ್ರೀ ರಾಮ ಕ್ಷೇತ್ರದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ಶಾಸಕ ಸುನೀಲ್ ನಾಯ್ಕ ಅನಾವರಣಗೊಳಿಸಿದರು.

ನಂತರ ನಡೆದ ಸಭಾ ಕಾರ್ಯಮದಲ್ಲಿ ಉಪಸ್ಥಿತರಿದ್ದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಮಾತನಾಡಿ ಈ ಭಾಗದಲ್ಲಿ ಶ್ರೀ ವೆಂಕಟೇಶ್ವರ ಪತ್ತಿನ ಸಂಘದ ಮೊದಲ ಶಾಖೆಯ ಇಂದು ಪ್ರಾರಂಭಗೊAಡಿದ್ದು ಸಂತೋಷದ ವಿಚಾರ ಮುಂದಿನ ದಿನಗಳಲ್ಲಿ ಬ್ಯಾಂಕು ಅಭಿವೃದ್ದಿ ಹೊಂದಿ ಕನಿಷ್ಟ 30 ಶಾಖೆ ತೆರಯುವಂತಾಗಲಿ ಗ್ರಾಹಕರಿಗೆ ಅವಶ್ಯವಿದ್ದ ಸಾಲವನ್ನು ಸಕಾಲದಲ್ಲಿ ನೀಡಿ ಅವರಿಂದ ನಿಗದಿತ ಸಮಯದಲ್ಲಿ ವಸೂಲಿ ಮಾಡುವ ಚಾಕಚಕ್ಯತೆ ಆಡಳಿತ ಮಂಡಳಿಯಲ್ಲಿರಬೇಕು ಎಂದರಲ್ಲದೇ ಬ್ಯಾಂಕಿನ ಸಿಬ್ಬಂದಿಗಳು ಸಹ ನಗುಮುಖದ ತ್ವರಿತ ಸೇವೆ ನೀಡುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳದ ನಾಮಧಾರಿಗುರು ಮಠದ ಅಧ್ಯಕ್ಷ ಕೃಷ್ಣ ನಾಯ್ಕ, ಶಿರಾಲಿ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಸುಬ್ರಾಯ ನಾಯ್ಕ, ಶಿರಾಲಿಯ ಮಾರುತಿ ಕೋ ಅಪರೇಟಿವ್ ಬ್ಯಾಂಕಿನ ಅಧ್ಯಕ್ಷ ಅಶೋಕ ಪೈ, ಹಳೆ ಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ, ಮಾತನಾಡಿದರು. ಪಶ್ವಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಹಾಗೂ ವೆಂಕಟೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋವಿಂದ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಮಂಜುನಾಥ ನಾಯ್ಕ ಪ್ರಾರ್ಥನೆ ಹಾಡಿದರು. ಬ್ಯಾಂಕಿನ ನಿರ್ದೇಶಕ ಶ್ರೀಧರ ನಾಯ್ಕ ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಎಸ್.ಎಂ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದೇವಾಡಿಗ ಸಮಾಜದ ಮುಕಂಡ ವೆಂಕ್ಟಯ್ಯ ಬೈರುಮನೆ, ನಾಮಧಾರಿ ಸಮಾಜದ ಮುಖಂಡರಾದ ಡಿ.ಬಿ.ನಾಯ್ಕ, ಎಂ.ಆರ್. ನಾಯ್ಕ, ನಿರ್ದೇಶಕರುಗಳಾದ ಮುಕುಂದ ನಾಯ್ಕ, ಮಾಸ್ತಿ ನಾಯ್ಕ, ಕೆ.ಆರ್.ನಾಯ್ಕ, ,ಕಟ್ಟಡದ ಮಾಲಕ ದುರ್ಗಾದಾಸ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ನೂತನ ಶಾಖೆಯ ಕಟ್ಟಡದ ಮಾಲಕ ದುರ್ಗಾದಾಸ ನಾಯ್ಕ ರವನ್ನು ಬ್ಯಾಂಕಿನ ನಿರ್ದೇಶಕ ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು.

error: