ಭಟ್ಕಳ: ಗದ್ದೆ ಕೆಲಸವನ್ನು ಮುಗಿಸಿಕೊಂಡು ದನದ ಹಾಲು ಕೊಡಲು ಬರುವ ವೇಳೆ ಕೊಂಕಣ ರೈಲ್ವೆ ಟ್ರಾö್ಯಕ್ ದಾಟುತ್ತಿರುವ ವೇಳೆ ಮಹಿಳೆಗೆ ರೈಲು ಬಡಿದು ದಾರುಣಾವಾಗಿ ಸಾವನ್ನಪ್ಪಿದ ಘಟನೆ ಭಟ್ಕಳ ತಾಲ್ಲೂಕಿನ ಯಲ್ವಡಿಕವೂರ ನಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಈರಮ್ಮಾ ಮಂಜಯ್ಯಾ ನಾಯ್ಕ ಯಲ್ವಡಿಕವೂರ ನಿವಾಸಿ ಎಂದು ತಿಳಿದು ಬಂದಿದೆ. ಬೆಳಗ್ಗೆ 10-30 ಕ್ಕೆ ಸಾಗುವ ಯಾವುದೋ ಒಂದು ರೈಲ್ವೆ ಡಿಕ್ಕಿ ಹೊಡೆದ ರಭಸಕ್ಕೆ ಸಿಡಿದ್ದು,ಬಿದ್ದು ಭುಜಕ್ಕೆ,ಕಾಲಗೆ ಮತ್ತು ಕೈಗಳಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಈ ಬಗ್ಗೆ ಮೃತ ಮಹಿಳಯ ಮಗ ಚಿಕ್ಕಯ್ಯಾ ನಾಯ್ಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿ ಕೊಂಡ ಪಿ.ಎಸ್.ಐ ಭರತಕುಮಾರ ತನಿಖೆ ಕೈಗೊಂಡಿದ್ದಾರೆ.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ