April 29, 2024

Bhavana Tv

Its Your Channel

ಈ ಬಾರಿ ನಿಮ್ಮ ಸುಳ್ಳುಗಳು ಕೆಲಸ ಮಾಡಲ್ಲ. ಈಗಾಗಲೆ ಭಟ್ಕಳಕ್ಕೆ ಮಾಂಕಾಳ ವೈದ್ಯ ಎಂದು ಜನ ತೀರ್ಮಾನ ಮಾಡಿಯಾಗಿದೆ-ಮಾಂಕಾಳ್ ಎಸ್.ವೈದ್ಯ.

ಭಟ್ಕಳ: ತನ್ನ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಮಾಂಕಾಳ್ ಎಸ್.ವೈದ್ಯ ಸೋಮವಾರ ನಾಮಪತ್ರ ಸಲ್ಲಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೈದ್ಯ, ಈಗಾಗಲೆ ಭಟ್ಕಳಕ್ಕೆ ಮಾಂಕಾಳ ವೈದ್ಯ ಎಂದು ಜನ ತೀರ್ಮಾನ ಮಾಡಿಯಾಗಿದೆ. ಶಿಕ್ಷಣ, ಆರೋಗ್ಯ, ಯುವ ಜನರಿಗೆ ಉದ್ಯೋಗ, ಕೃಷಿ ನಿರಾವರಿ ನನ್ನ ಆದ್ಯತೆಯಾಗಿದೆ. ಈ ಬಾರಿ ನಿಮ್ಮ ಸುಳ್ಳುಗಳು ಕೆಲಸ ಮಾಡಲ್ಲ. ನಿಮ್ಮ ಸುಳ್ಳು ಹಿಂದುತ್ವದ ಬಗ್ಗೆ ಜನರು ಜಾಗೃತರಾಗಿದ್ದಾರೆ. ದಯಮಾಡಿ ನೀವು ಹಿಂದುತ್ವದ ಹೆಸರು ಹೇಳಿಕೊಂಡು ಜನರ ಬಳಿ ಹೋಗಬೇಡಿ. ಪೆಟ್ಟು ತಿನ್ನಬೇಕಾದೀತು ಎಂದು ಹೆಸರು ಹೇಳದೆಯೇ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕರನ್ನು ಎಚ್ಚರಿಸಿದರು. ಇಲ್ಲಿ ತ್ರಿಶಂಕು ಇಲ್ಲ ಯಾವುದು ಇಲ್ಲ. ಜನರು ಇಲ್ಲಿನ ಶಾಸಕ ಯಾರಾಗಬೇಕು ಎಂದು ಈಗಾಗಲೆ ತೀರ್ಮಾನ ಮಾಡಿಬಿಟ್ಟಿದ್ದಾರೆ. ಜನರ ಆಶೀರ್ವಾದ ನನ್ನ ಮೇಲೆ ಇದೆ, ಕಾರ್ಯಕರ್ತರು, ಮುಖಂಡರು ಎಲ್ಲ ಸಮಾಜದ ಹಿರಿಯರ ಅಶೀರ್ವಾದ ನನಗೆ ದೊರಕಿದೆ ಎಂದ ಅವರು, ಹಿಂದೂ ಧರ್ಮ ಬಹಳ ವಿಶಾಲವಾಗಿದೆ ಅದನ್ನು ನೀವು(ಬಿಜೆಪಿ)ಯವರು ಬಹಳ ಕುಬ್ಜವನ್ನಾಗಿಸುತ್ತಿದ್ದೀರಿ. ಎಲ್ಲರನ್ನೂ ಪ್ರೀತಿಸುವುದೇ ಹಿಂದೂ ಧರ್ಮವಾಗಿದ್ದು ಅದು ಹಿಂದುತ್ವಕ್ಕಿAತ ತೀರ ಭಿನ್ನವಾಗಿದೆ ಎಂದರು.

ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ ಸೇರಿದಂತೆ ತಾಲೂಕಿನ ಎಲ್ಲ ಸಮಾಜದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

error: