April 29, 2024

Bhavana Tv

Its Your Channel

ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘ ಇದರ ನೇತೃತ್ವದಲ್ಲಿ ತಾಲುಕಾ ಸಮಾವೇಶ

ಹೊನ್ನಾವರ ; ತಾಲೂಕಿನ ಚಿತ್ತಾರ ಗ್ರಾಮದ ಮುರಗೋಳಿಯಲ್ಲಿ ತಾಲುಕಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘ ಇದರ ನೇತೃತ್ವದಲ್ಲಿ ತಾಲುಕಾ ಸಮಾವೇಶ ಸಚೀವ ಮಂಕಾಳ ವೈದ್ಯ ಚಾಲನೆ ನೀಡಿದರು.

ಗುಮಟೆ ಬಾರಿಸುವ ಮೂಲಕ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚೀವರು ಗ್ರಾಮೀಣ ಕಲೆಯನ್ನು ಇಂದಿಗೂ ಮುನ್ನಡೆಸುತ್ತಿರುವ ಸಮಾಜದಲ್ಲಿ ಕುಂಬ್ರಿ ಮರಾಠಿ ಸಮಾಜವು ಒಂದಾಗಿದೆ. ಈ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಿ ತಮ್ಮ ಸಮಾಜದವರಿಗೆ ನೆರವಾಗಬೇಕು. ಸಮಾಜಕ್ಕೆ ಅನೂಕೂಲವಾಗಲು ಸಭಾಭವನ ನಿರ್ಮಿಸಲು ವೈಯಕ್ತಿಕವಾಗಿ ಸಹಾಯ ಮಾಡುವುದರ ಜೊತೆಯಲ್ಲಿ ಕಟ್ಟಡಕ್ಕೆ 1 ಕೋಟಿ ರೂಪಾಯಿ ಸರಕಾರದಿಂದ ಮಂಜೂರು ಮಾಡುವ ಭರವಸೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮರಾಠಿ ಪ್ರಾಸ್ತಾವಿಕ ಮಾತನಾಡಿ ಸಮಾಜವನ್ನು ಎಸ್.ಸಿ, ಎಸ್.ಟಿಗೆ ಸೇರಿಸುವ ಕುರಿತು ಹಾಗೂ ಸಮಾಜದ ಸಭಾಭವನ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿದರು.
ಸಮಾಜದ ತಾಲೂಕ ಅಧ್ಯಕ್ಷರಾದ ರಮೇಶ ಮರಾಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ತಾಲೂಕ ಗೌರವಾಧ್ಯಕ್ಷ ಗಿರಿಧರ ಮರಾಠಿ ಜಿಲ್ಲಾ ಸಮಿತಿ ಸದಸ್ಯ ಉಮೇಶ ಮರಾಠಿ, ರಮೇಶ ಮರಾಠಿ, ದತ್ತು ಮರಾಠಿ, ಹಾಗೂ ತಾಲುಕಾ ಪ್ರಧಾನ ಕಾರ್ಯದರ್ಶಿ ಉತ್ತಮ ಮರಾಠಿ, ಸುಕ್ರ ಮರಾಠಿ, ಲಕ್ಷ್ಮಣ ಮರಾಠಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ನಾರಾಯಣ ಮರಾಠಿ ವಂದಿಸಿ, ಅಣ್ಣಪ್ಪ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸಾಮೋಹಿಕ ಸತ್ಯನಾರಾಯಣ ಪೂಜೆ, ನಂತರ ಸಂಪೂಳ್ಳಿ ಗ್ರಾಮಸ್ಥರು ಪ್ರದರ್ಶಿಸಿದ ಸುಗ್ಗಿ ಕುಣಿತದ ಕೋಲಾಟ , ಮುರಗೋಳಿ ಶಾಲೆ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿತು.

ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: