April 29, 2024

Bhavana Tv

Its Your Channel

ತಾಲೂಕಾ ಪಂಚಾಯತಕ್ಕೆ ಭೇಟಿ ನೀಡಿ ಆಡಳಿತ ವ್ಯವಸ್ಥೆಗೆ ಚುರುಕು ನೀಡಿದ ಶಾಸಕ ದಿನಕರ ಶೆಟ್ಟಿ

ಹೊನ್ನಾವರ:– ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿಯವರು ತಾಲೂಕಾ ಪಂಚಾಯತ ಸಬಾಭವನದಲ್ಲಿ ಹೆಸ್ಕಾ0ಗೆ ಸಂಬoಧ ಪಟ್ಟ ಪರಿಹಾರದ ಚೆಕ್ ವಿತರಣೆಗೆ ಬಂದಿದ್ದ ಸಮಯದಲ್ಲಿ ತಾಲೂಕಾ ಪಂಚಾಯತ ಸಿಬ್ಬಂದಿಗಳ ಹಾಜರಾತಿ, ಕೆಲಸದ ಕಾರ್ಯವ್ಯಾಪ್ತಿ ಪರಿಶೀಲನೆ ಮಾಡಿ ಆಡಳಿತ ವ್ಯವಸ್ಥೆಗೆ ಚುರುಕು ನೀಡುವ ಪ್ರಯತ್ನ ಮಾಡಿದರು.

ತಾಲೂಕಾ ಪಂಚಾಯತ ಸಿಬ್ಬಂದಿಗಳು ರಜೆ ಇದ್ದವರ ಬಗ್ಗೆ ರಜೆ ಅರ್ಜಿಯ ದಾಖಲಾತಿ ಪರಿಶೀಲಿಸಿದರು. ಉಪಸ್ಥಿತರಿದ್ದ ಸಿಬ್ಬಂದಿಗಳ ಕೆಲಸದ ಮಾಹಿತಿ ಪಡೆದು ತ್ವರಿತಗತಿಯಲ್ಲಿ ಕೆಲಸ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು. ಜನರ ಸಮಸ್ಯೆಗೆ ತೊಂದರೆ ಆಗದಂತೆ ಕಾರ್ಯನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಾಸಕರ ದಿಡೀರ್ ಈ ಕ್ರಮಕ್ಕೆ ತಾಲೂಕಾ ಪಂಚಾಯತ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಕೊಂಚ ಗಲಿಬಿಲಿ ಗೊಂಡoತೆ ಕಂಡುಬ0ತು. ಕೆಲಸದ ಮೇಲೆ ಹೊರಗಡೆ ಹೋದ ಸಿಬ್ಬಂದಿಗಳಿಗೆ ದೂರವಾಣಿಯಲ್ಲಿ ಸಂಪರ್ಕ ಮಾಡಿ ಶಾಸಕರಿಗೆ ಮಾತನಾಡಿಸಿದರು. ಸಿಬ್ಬಂದಿಗಳು ಆದಿನ ಮಾಡಿದ ಕೆಲಸವನ್ನು ಕೂಡ ಖುದ್ದಾಗಿ ಪರಿಶೀಲಿಸಿದರು.

ಅನಂತರ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಸದಸ್ಯರಾದ ಮಹೇಶ ಮೇಸ್ತ, ಮುಖಂಡರಾದ ರಘುಪೈ, ಶ್ರೀಕಾಂತ್ ಮೋಗೇರ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ.

error: