ಹೊನ್ನಾವರ: ಸುವರ್ಣಕಾರರ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್. ಕಿಂತಾಲಕೇರಿ ಹೊನ್ನಾವರ , ಇದರ ಇನ್ನೊಂದು ಶಾಖೆಯು ಮಂಕಿ ಬಣಸಾಲೆಯ ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭವಾಗಲಿದೆ.
ಹೊನ್ನಾವ
ಹೊನ್ನಾವರದಲ್ಲಿ ಪ್ರದಾನ ಕಛೇರಿಯನ್ನು ಹೊಂದಿ ವ್ಯವಹಾರ ನಡೆಸುತ್ತಿರುವ ಸುವರ್ಣಕಾರರ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್. ತನ್ನ ಇನ್ನೊಂದು ಶಾಖೆಯನ್ನು ಮಂಕಿಯಲ್ಲಿ ತೆರೆಯುತ್ತಿದೆ. ಇದರ ಉದ್ಘಾಟನಾ ಸಮಾರಂಭವು ಪೆಬ್ರುವರಿ ೪ ಶುಕ್ರವಾರದಂದು ನಡೆಯಲಿದೆ. ಕರ್ಕಿಯ ದೈವಜ್ಞ ಮಠಾದೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮಿಗಳ ಅಮೃತ ಹಸ್ತದಿಂದ ಬೆಳಿಗ್ಗೆ ೧೦.೧೦ ಕ್ಕೆ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಮಾರ್ಕೆಟಿಂಗ್ ಸೊಸೈಟಿ ಲಿಮಿಟೆಡ್ ಹೊನ್ನಾವರ ಇದರ ಅಧ್ಯಕ್ಷರಾದ ದೀಪಕ್ ನಾಯ್ಕ. ಕುಮಟಾ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಕಲ್ಮನೆ, ಮಂಕಿ ಬಣಸಾಲೆ ಶ್ರೀ ಮಹಾಗಣಪತಿ ದೇವಸ್ಥಾನದ ಉಪಾಧ್ಯಕ್ಷರು ಚಂದ್ರಕಾAತ ಮರ್ತು ಶೇಟ ಹಾಗೂ ಮಂಕಿಯ ಶ್ರೀ ರಾಮ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಶ್ರೀ ಹನುಮಂತ ರಾಮಚಂದ್ರ ನಾಯ್ಕ ಹಾಗೂ ಮತ್ತಿತರರು ಆಗಮಿಸಲಿದ್ದಾರೆ.
೪ ನೆ ತಾರಿಕಿಗೆ ನಡೆಯುವ ಈ ಸಮಾರಂಭ ಕ್ಕೆ ಸಾರ್ವಜನಿಕರು ಆಗಮಿಸಬೇಕೆಂದು ಸೊಸೈಟಿಯ ಆಡಳಿತ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್