ಹೊನ್ನಾವರ ಶರಾವತಿ ಸೇತುವೆ ಮೇಲೆ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಹುಡುಗರು ಶರಾವತಿ ನದಿಯಲ್ಲಿ ಬಿದ್ದು ಒಬ್ಬನನ್ನು ಮೀನುಗಾರರು ರಕ್ಷಣೆ ಮಾಡಿದ್ದು ಇನ್ನೊಬ್ಬ ನೀರಿನಲ್ಲಿ ಮುಳುಗಿ ಕಾಣೆಯಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಶರಾವತಿ ಸೇತುವೆಯ ಮೇಲೆ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಬ್ರೀಝಾ ಕಾರು ಅತಿವೇಗವಾಗಿ ಓವರ್ ಟೇಕ್ ಮಾಡುವಾಗ, ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದ ಅಕ್ಷಯ ರಮೇಶ್ ತಾಂಡೇಲ್ ಕಾಸರಕೋಡು ಮಜಾರಲ್ಲೋ ಸ್ಕೂಲ್ ಹತ್ತಿರದ ನಿವಾಸಿ ಹಾಗೂ ಸುನೀಲ್ ಕುಡ್ತಲಕರ್ ಹಿರೇಮಠ ಕಾಸರಕೋಡು ಹೊನ್ನಾವರ ಇಬ್ಬರು ಶರಾವತಿ ನದಿಯಲ್ಲಿ ಬಿದ್ದವರಾಗಿದ್ದಾರೆ.
ನದಿಯಲ್ಲಿ ಬಿದ್ದು ಸೇತುವೆಯ ಕಂಬಕ್ಕೆ ಇರುವ ರೋಪ್ ಹಿಡಿದು ತೆಲುತ್ತಿದ್ದ ಸುನೀಲ್ ಕುಡ್ತಲಕರನನ್ನು
ಅಲ್ಲಿಯೇ ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರು ರಕ್ಷಣೆ ಮಾಡಿದ್ದು ಅಕ್ಷಯ ರಮೇಶ್ ತಾಂಡೇಲ್ ಈತನು ಶರಾವತಿ ನದಿಯ ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾನೆ. ಸುನೀಲ್ ಮೇಸ್ತನಿಗೆ ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯಲಾಗಿದೆ. ಅಕ್ಷಯ ತಾಂಡೇಲನನ್ನು ಹುಡುಕುವ ಕಾರ್ಯ ಮುಂದುವರೆದಿದೆ
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್