April 29, 2024

Bhavana Tv

Its Your Channel

ಜೀವನ ಜ್ಯೋತಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪ್ರಮಾಣ ಪತ್ರ ಪ್ರಧಾನ ಸಮಾರಂಭ

ಹೊನ್ನಾವರ :– ಜೀವನ ಜ್ಯೋತಿ ಕೈಗಾರಿಕಾ ತರಬೇತಿ ಕೇಂದ್ರ, ಹೊನ್ನಾವರ ಶುಕ್ರವಾರ (ದಿನಾಂಕ 29-07-2022) ರಂದು 2021 ಹಾಗೂ 2022 ರ ಸಾಲಿನಲ್ಲಿ ತಮ್ಮ ಒಂದು ಹಾಗೂ ಎರಡು ವರ್ಷದ ತರಬೇತಿಯನ್ನು ಪೂರೈಸಿ ಹೊರ ಹೋಗುತ್ತಿರುವ ತರಬೇತಿದಾರರಿಗೆ ಪ್ರಮಾಣ ಪತ್ರ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಅನೇಕ ಗಣ್ಯರ ಹಾಗೂ ಪಾಲಕರ ಸಮಕ್ಷಮದಲ್ಲಿ ಅತ್ಯಂತ ವಿಜೃಂಭಣೆಯಿoದ ನೆರವೇರಿತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಹೊನ್ನಾವರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ದೇವಿದಾಸ.ಟಿ.ನಾಯ್ಕರವರು ತಾಂತ್ರಿಕ ಶಿಕ್ಷಣದ ಮಹತ್ವವನ್ನು ತರಬೇತಿದಾರರಿಗೆ ತಿಳಿಸಿ ಹೇಳಿ ಜೀವನದಲ್ಲಿ ಗೆಲುವಿನ ರಹಸ್ಯದ ಬಗ್ಗೆ ಕಿವಿ ಮಾತು ಹೇಳಿದರು. ಇಂದಿನ ಆಧುನಿಕ ಯುಗದಲ್ಲಿ ಆಧ್ಯಾತ್ಮಿಕ ಜೀವನದ ಮಹತ್ವವನ್ನು ವಿವರಿಸಿ, ಈ ಮೂಲಕ ಒತ್ತಡ ನಿರ್ವಹಣೆಯ ಬಗ್ಗೆ ಮನವರಿಕೆ ಮಾಡಿ ಕೊಟ್ಟರು.

ಈ ಸಮಾರಂಭಕ್ಕೆ ಗೌರವಾನ್ವಿತ ಅತಿಥಿಯಾಗಿ ಬೆಂಗಳೂರಿನಿoದ ಆಗಮಿಸಿದ ದಿ.ಬ್ರರ‍್ಸ್ ಆಫ್ ಹೋಲಿ ಕ್ರಾಸ್
ಸಂಸ್ಥೆಯ ಮುಖ್ಯಸ್ಥರಾದ ವಂದನೀಯ ಬ್ರದರ್ ಸಂತೋಷ್ ಪಿ.ಜೆ ಅವರು ತರಬೇತಿದಾರರ ಉಜ್ವಲ ಭವಿಷ್ಯಕ್ಕೆ
ಪೂರಕವಾಗಿ ನಿರ್ಧಾರ ತೆಗೆದುಕೊಳ್ಳುವುದರ ಬಗ್ಗೆ ವಿವರಿಸಿ ಹೇಳಿದರು.

ಈ ಸಂದರ್ಭದಲ್ಲಿಗೌರವಾನ್ವಿತ ಅತಿಥಿಯಾಗಿ ಹಾಜರಿದ್ದ ಹೊನ್ನಾವರ ಸಾನ್ ಸಾಲ್ವಾದೋರ್ ಚರ್ಚಿನ
ಪ್ಯಾರಿಷ್ ಪ್ರೀಸ್ಟ್ ಆದ ವಂದನೀಯ ಫಾದರ್ ಸಲ್ವಾದೋರ್ ಗೊನ್‌ಸಾಲ್ವಿಸ್ ಅವರು ಆಶೀರ್ವಚನ ನೀಡಿ
ಶುಭ ಹಾರೈಸಿದರು.

ಪ್ರಾಂಶುಪಾಲರಾದ ಬಸ್ತಾö್ಯಂವ್ ಡಿಕೋಸ್ಟಾ ಅವರು ವಾರ್ಷಿಕ ವರದಿಯನ್ನು ಓದಿದರು.
ಹಾಗೂ ಶಿಕ್ಷಕರಾದ ಜೇವಿಯರ್ ಲೋಪಿಸ್ ಮತ್ತು ಶಿಕ್ಷಕಿಯಾದ ಶೀಲಾ ಆಚಾರಿ ರವರು ಕಾರ್ಯಕ್ರಮದ
ನಿರೂಪಣೆ ಮಾಡಿದರು .

error: