ಹೊನ್ನಾವರ ಜ್ಞಾನಪೀಠ ಪಶಸ್ತಿ ಪುರಸ್ಕೃತರೂ, ನವ್ಯಸಾಹಿತ್ಯ ಪಂಥದ ಹರಿಕಾರರೂ ಆದ ಡಾ. ವಿ. ಕೃ ಗೋಕಾಕ್ಅವರು ಪಠ್ಯಪುಸ್ತಕಗಳಲ್ಲಿ ಹಿನ್ನೆಲೆಗೆ ಸರಿದಿದ್ದರೂ’ಗೋಕಾಕ್ ಚಳುವಳಿ’ಯಿಂದಾಗಿ ಕನ್ನಡ ನಾಡಿನಲ್ಲಿ ಅವರು ಎಂದಿಗೂ ಜೀವಂತವಾಗಿ ಉಳಿದಿದ್ದಾರೆ ಎಂದುಚಿAತಕ, ಕನ್ನಡ ಪ್ರಾಧ್ಯಾಪಕ, ಡಾ.ರಂಗನಾಥ ಕಂಟನಕುAಟೆ ಅಭಿಪ್ರಾಯಪಟ್ಟರು.
ಅವರು ಹೊನ್ನಾವರದಎಸ್. ಡಿ. ಎಂ.ಪದವಿ ಕಾಲೇಜಿನಕನ್ನಡಸಂಘ ಮತ್ತು ವಿನಾಯಕಗೋಕಾಕ್ ವಾಙ್ಮಯ ಟ್ರಸ್ಟ್, ಬೆಂಗಳೂರು ಇವರ ಸಹಯೋಗದಲ್ಲಿಡಾ. ವಿ.ಕೃ.ಗೋಕಾಕ್ ಜನ್ಮದಿನಾಚರಣೆ ಪ್ರಯುಕ್ತ ಕಾಲೇಜಿನಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತುಕಾವ್ಯ ಶ್ರಾವಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿದರು.
1982ರ ಹೊತ್ತಿಗೆ ನಡೆದಗೋಕಾಕ್ ಚಳುವಳಿ ಒಂದು ಮಾದರಿ ಚಳುವಳಿ.ಅದುಎಲ್ಲಾ ವಯೋಮಾನದವರು ಸೇರಿಕನ್ನಡದ ಅಸ್ಮಿತೆಯ ಪುನರ್ಸ್ಥಾಪನೆಗಾಗಿ ಹೋರಾಡಲುಜನಮಾನಸವನ್ನು ಪ್ರೇರೇಪಿಸಿದ ಚಳುವಳಿ.ವಿಶ್ವವಿದ್ಯಾಲಯಗಳ ಸುತ್ತೋಲೆಗಳಲ್ಲಿ, ಪಠ್ಯಗಳಲ್ಲಿಕನ್ನಡ ಭಾಷಾ ಶುದ್ಧಿಯ ಕೊರತೆ ಕಂಡುಬರುತ್ತ್ತಿದೆ.ಅಡಿಗೆ ಮನೆಯಲ್ಲಿ ಯೂಕಾಣೆಯಗುತ್ತಿರುವ ಕನ್ನಡದ ಕುರಿತು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.ಇಂದು ಕನ್ನಡ ಹಿಂದೆAದಿಗಿAತಲೂ ಸಂಕಷ್ಟದಲ್ಲಿದೆ. ಹಾಗಾಗಿ ಇಂದು ಕನ್ನಡದ ಉಳಿವಿಗೆ ಗೋಕಾಕ್ ಮಾದರಿಯ ಚಳುವಳಿ ಅವಶ್ಯಕತೆಯಿದೆ ಎಂದರು. ವಿ. ಕೃ ಗೋಕಾಕ್ ಟ್ರಸ್ಟ್ನ ಸದಸ್ಯರೂಆಗಿರುವ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕವಾಗಿ ಮಾತನಾಡಿ ಟ್ರ್ರಸ್ಟಿನ ಅಧ್ಯಕ್ಷರಾದ ಬಿ.ಎಸ್. ವಿಶ್ವನಾಥ್, ಕಾರ್ಯದರ್ಶಿ ಅನಿಲ್ ಗೋಕಾಕ್, ನ. ರವಿಕುಮಾರ್ ಹಾಗೂ ಟ್ರಸ್ಟಿನ ಹಿರಿಯ ಸಲಹೆಗಾರರಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮಾರ್ಗದರ್ಶನ ಮತ್ತು ಸಹಕಾರವನ್ನು ಸ್ಮರಿಸಿದರು.
ನಂತರ ನಡೆದ ಕಾವ್ಯ ಶ್ರಾವಣ ಕಾರ್ಯಕ್ರಮದಲ್ಲಿ ಡಾ.ಎನ್. ಆರ್.ನಾಯಕ, ಡಾ.ಶ್ರೀಪಾದ ಶೆಟ್ಟಿ, ಸರಸ್ವತಿ ಗಂಗೊಳ್ಳಿ, ಕೃಷ್ಣಮೂರ್ತಿ ಹೆಬ್ಬಾರ, ನಾರಾಯಣ ಹೆಗಡೆಕರ್ಕಿ, ಪ್ರಶಾಂತ ಮೂಡಲಮನೆ, ವಿದ್ಯಾಧರಕಡತೋಕ ಹಾಗೂ ಕಾಲೇಜಿನ ವಿದ್ಯಾರ್ಥಿ ಕವಿಗಳು ಕವಿತೆ ವಾಚಿಸಿದರು. ಪ್ರಾಚಾರ್ಯರಾದ ಡಾ. ವಿಜಯಲಕ್ಷಿö್ಮ ಎಂ. ನಾಯ್ಕ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ವಿದ್ಯಾಧರ ನಾಯ್ಕ ನಿರೂಪಿಸಿದರು. ಪ್ರಶಾಂತ ಹೆಗಡೆ ವಂದಿಸಿದರು.
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ