ಹೊನ್ನಾವರ: ಮಂಕಿಯ ಶ್ರೀ ಸರ್ವೆಶ್ವರಿ ಆತ್ಮಾನಂದ ಸದ್ಗುರು ಸನ್ನಿಧಿ ಗುರುಮಠದ ಮುಖ್ಯ ದ್ವಾರದಿಂದ ಮೆರವಣಿಗೆ ಮುಖಾಂತರ ನಾಡತೇರನ್ನು ಅದ್ದೂರಿಯಾಗಿ ಪೂರ್ಣ ಕುಂಭದ ಮೂಲಕ ಗುರುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು
ಹೊನ್ನಾವರ ತಾಲೂಕ ಪಂಚಾಯತಿ, ಹಾಗೂ ಪಟ್ಟಣ ಪಂಚಾಯತ ಮಂಕಿ ಹಾಗೂ ವಿವಿಧ ಇಲಾಖೆಯ ಸಹಭಾಗಿತ್ವದಲ್ಲಿ ನಾಡಪ್ರಭು ಕೆಂಪೆಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣದ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ನಾಡ ತೇರನ್ನು ಮಂಕಿ ಪ.ಪಂ.ಮುಖ್ಯಾಧಿಕಾರಿ ಅಜೇಯ್ ಭಂಡಾರಕ ಇವರ ಸಾರಥ್ಯದಲ್ಲಿ ಇತಿಹಾಸ ಪ್ರಸಿದ್ಧವಾದ ಶ್ರೀ ಸರ್ವೆಶ್ವರಿ ಆತ್ಮಾನಂದ ಸದ್ಗುರು ಸನ್ನಿದಿ ಗುರುಮಠದ ಮುಖ್ಯ ದ್ವಾರದಿಂದ ಮೆರವಣಿಗೆ ಮುಖಾಂತರ ನಾಡತೇರನ್ನು ಅದ್ದೂರಿಯಾಗಿ ಪೂರ್ಣ ಕುಂಭದ ಮೂಲಕ ಗುರುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಇದೇ ವೇಳೆ ಭಟ್ಕಳ ಹೊನ್ನಾವರ ಶಾಸಕರಾದ ಸುನೀಲ್ ನಾಯ್ಕ , ನಾಡ ಪ್ರಭು ಕೆಂಪೆಗೌಡರ ತೇರಿಗೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ, ಗೌಡ ಸಮುದಾಯದ ಹೆಮ್ಮೆಯ ನಾಯಕರಾದ ಕೆಂಪೆಗೌಡರ ಕುರಿತು ಮಾತನಾಡಿ ಬೆಂಗಳೂರು ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು. ಹಾಗೂ ಸಮುದಾಯದ ಸಂಸ್ಕೃತಿ, ಪರೋಪಕಾರ ಭಾವನೆ, ಸಮಾಜದಲ್ಲಿ ಸೌಮ್ಯತೆಯೊಂದಿಗೆ, ಸರ್ವರಲ್ಲಿಯೂ ಒಂದಾಗಿ 'ಸರ್ವೇ ಜನಾ: ಸುಖಿನೋ ಭವಂತು ಎಂಬ ವಾಕ್ಯದೊಂದಿಗೆ ಕನ್ನಡ ನಾಡನ್ನು ಕಟ್ಟಲು ಹಗಲಿರುಳು ಶ್ರಮಿಸಿ ನೀಡಿದ ಕೊಡುಗೆ ಅವಿಸ್ಮರಣಿಯ ಎಂದರು.
ಮಂಕಿ ಪುರದ ಇತಿಹಾಸ ಪ್ರಸಿದ್ಧವಾದ ಶ್ರೀ ಸರ್ವೆಶ್ವರಿ ಆತ್ಮಾನಂದ ಸದ್ಗುರು ಸನ್ನಿಧಿ ಗುರುಮಠದಲ್ಲಿ ಸಂಗ್ರಹಿಸಲಾದ ಪವಿತ್ರವಾದ ಮಣ್ಣನ್ನು ಹಸ್ತಾಂತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಹತ್ತರ ಕಾರ್ಯದಲ್ಲಿ ಜಿಲ್ಲೆಯಲ್ಲಿ ತೊಡಗಿಸಿಕೊಂಡ ಜಿಲ್ಲಾ ಪಂಚಾಯತ ಅಧಿಕಾರಿ ವಿರುಪಾಕ್ಷ ಪಾಟೀಲ್ ಮತ್ತು ಸುರೇಶ ನಾಯ್ಕ ಸಹಾಯಕ ನೋಡೆಲ್ ಅಧಿಕಾರಿ ಜಿಲ್ಲಾ ಪಂಚಾಯತ ಕಾರವಾರ ಇವರನ್ನು ಅಭಿನಂದಿಸಲಾಯಿತು
ಮ0ಕಿ ಪಟ್ಟಣ ಪಂಚಾಯತ ವ್ಯಾಪ್ತಿಯ ಅಂಗನವಾಡಿ ಕಾರ್ಯ ಕರ್ತೆಯರು, ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಸ್ವಸಹಾಯ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಮಂಕಿ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್