May 17, 2024

Bhavana Tv

Its Your Channel

ಕಸಾಪ ಜಿಲ್ಲಾ ಪದಾಧಿಕಾರಿಗಳ ಮತ್ತು ತಾಲೂಕಾಧ್ಯಕ್ಷರ ಯಾದಿ ಬಿಡುಗಡೆ.

ಕಾರವಾರ:- ಕನ್ನಡ ಸಾಹಿತ್ಯ ಪರಿಷತ್ ಗೆ ಜಿಲ್ಲೆಯಲ್ಲಿನ ಪದಾಧಿಕಾರಿಗಳನ್ನು ನೇಮಕ ಮಾಡಿ ಅವರ ಯಾದಿಯನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ ಮಾಧ್ಯಮದವರ ಮುಂದೆ ಬಿಡುಗಡೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕಸಾಪದ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಕುಮಟಾದ ಪಿ.ಆರ್. ನಾಯ್ಕ ಹಾಗೂ ಕಾರವಾರದ ಜಾರ್ಜ್ ಫರ್ನಾಂಡೀಸ್ ರನ್ನು ನೇಮಕ ಮಾಡಲಾಗಿದೆ .ಜಿಲ್ಲಾ ಗೌರವ ಕೋಶಾಧ್ಯಕ್ಷರಾಗಿ ದಾಂಡೇಲಿ ಮುರ್ತುಜಾ ಹುಸೇನ್ ರನ್ನು ನೇಮಕ ಮಾಡಲಾಗಿದೆ.
ತಾಲೂಕಾಧ್ಯಕ್ಷರು:-ಕಾರವಾರ- ರಾಮಾ ನಾಯ್ಕ, ಅಂಕೋಲಾ-ಗೋಪಾಲಕೃಷ್ಣ ನಾಯಕ, ಕುಮಟಾ -ಸುಬ್ಬಯ್ಯಾ ನಾಯ್ಕ, ಹೊನ್ನಾವರ- ಸುಬ್ರಾಯ ಗೌಡಾ, ಭಟ್ಕಳ- ಗಂಗಾಧರ ನಾಯ್ಕ, ಶಿರಸಿ- ಜಿ.ಸುಬ್ರಾಯ ಭಟ್, ಸಿದ್ಧಾಪುರ-ಗೋಪಾಲ ನಾಯ್ಕ, ಯಲ್ಲಾಪುರ-ಸುಬ್ರಹ್ಮಣ್ಯ ಭಟ್ಟ, ಮುಂಡಗೋಡ-ಸಹದೇವ ನಡಿಗೇರ , ಹಳಿಯಾಳ- ಸಮಂಗಲಾ ಅಂಗಡಿ, ದಾಂಡೇಲಿ-ನಾರಾಯಣ ನಾಯ್ಕ , ಜೋಯಿಡಾ-ಪಾಡುರಂಗ ಪಟಗಾರ,

ಮಹಿಳಾ ಸಾಹಿತಿಗಳು:- ಸೀತಾ ದಾನಗೇರಿ ಜೋಯಿಡಾ, ಸಮಂಗಲಾ ಹನುಮರೆಡ್ಡಿ ಯಲ್ಲಾಪುರ.
ಪರಿಶಿಷ್ಟ ಜಾತಿ ಪ್ರತಿನಿಧಿಗಳು: ಜಯಶೀಲ ಅಗೇರ ಅಂಕೋಲಾ, ಪಿ.ಎಮ್. ಮುಕ್ರಿ ಕುಮಟಾ,
ಪರಿಶಿಷ್ಟ ಪಂಗಡ ಪ್ರತಿನಿಧಿ: ಸಿದ್ದಪ್ಪ ಬಿರಾದಾರ ಹಳಿಯಾಳ,
ಸಂಘ ಸಂಸ್ಥೆಗಳ ಪ್ರತಿನಿಧಿ: ಡಾ. ವೆಂಕಟೇಶ ನಾಯ್ಕ ಶಿರಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ಜಿಲ್ಲಾ ವಾರ್ತಾಧಿಕಾರಿಗಳು, ಜಿಲ್ಲಾ ಸಮಿತಿಯ ಪದನಿಮಿತ್ತ ಸದಸ್ಯರು,
ನಿಕಟಪೂರ್ವ ಅಧ್ಯಕ್ಷರು: ಅರವಿಂದ ಕರ್ಕಿಕೋಡಿ ಹೊನ್ನಾವರ, ಹಾಗೂ ಜಿಲ್ಲೆಯ ಹಿರಿಯ ಸಾಹಿತಿಗಳು, ಸಂಸ್ಕೃತಿ ಚಿಂತಕರು, ಕಲಾವಿದರನ್ನು ವಿಶೇಷ ಆಮಂತ್ರಿತರಾಗಿ – ಆಹ್ವಾನಿಸಲಾಗುವುದು ಎಂದು ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.

error: