April 26, 2024

Bhavana Tv

Its Your Channel

ಕಾರವಾರ ತಾಲೂಕಿನ ವಿವಿಧ ಕಡೆ ಪ್ರವಾಹ ಭೀತಿ- ಸ್ಥಳಕ್ಕೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಹಾಗೂ ಅಧಿಕಾರಿಗಳು ಭೇಟಿ

ಕಾರವಾರ: ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಕಾರವಾರ ತಾಲೂಕಿನ ವಿವಿಧ ಕಡೆ ಪ್ರವಾಸ ಸ್ಥಿತಿ ನಿರ್ಮಾಣವಾಗಿದೆ. ಜನರು ತೀರಾ ಸಮಸ್ಯೆಯಲ್ಲಿದ್ದು ಬಿಣಗಾ, ಅರಗಾ ಹಾಗೂ ಮುದಗಾ ಮುಂತಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಜೊತೆಗೆ ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿರ್ಮಾಣ ಹಂತದಲ್ಲಿರುವ ಚತುಸ್ಪಧ ಹೆದ್ದಾರಿ ಸುರಂಗ ಮಾರ್ಗದದಲ್ಲಿಯು ಗುಡ್ಡ ಕುಸಿದಿದೆ,
ಜನರಿಗೆ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಕಂದಾಯ, ಗ್ರಾಮೀಣಾಭಿವೃದ್ದಿ, ಐಆರ್ ಬಿ ಅಧಿಕಾರಿಗಳಿಗೆ ಹಾಗೂ ನೇವಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಮನ್ ಪ್ನೇನೆಕರ್, ಡಿವೈಎಸ್‌ಪಿ ಡಿಸೋಜ್, ತಹಶಿಲ್ದಾರರ ನರೋನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

error: