ಕುಮಟಾ : ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿ ಶಾರದ ಶೆಟ್ಟಿ ಪಕ್ಷದ ಮುಖಂಡರ ಹಾಗೂ ಹೆಲ್ತ್ ವಾರಿಯರ್ಸ ಗಳ ಜೊತೆ ಕುಮಟಾ ಪುರಸಭಾ ವ್ಯಾಪ್ತಿಯಲ್ಲಿ ಕೆಲವು ಮನೆಗಳಿಗೆ ಭೇಟಿನೀಡಿ ಕಾಂಗ್ರೆಸ್ ಪಕ್ಷದ ಕೊರೋನಾ ಸಹಾಯ ಹಸ್ತ ಅಭಿಯಾನಕ್ಕೆ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು ಕೆಪಿಸಿಸಿ ನಿರ್ದೇಶನದಂತೆ ಮುಂದಿನ ೩೦ ದಿನಗಳ ಕಾಲ ಪುರಸಭೆ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೊರೋನ ಸಹಾಯ ಹಸ್ತ ಅಭಿಯಾನ ನಡೆಯಲಿದ್ದು, ಬ್ಲಾಕ್ ಮಟ್ಟದಲ್ಲಿ ಮುಖಂಡರ ವಾರಿಯರ್ಸ್ ತಂಡ ರಚಿಸಲಾಗಿದೆ. ಪ್ರತಿ ವಾರಿಯರ್ಸ್ ಗಳು ಪ್ರತಿ ದಿನ ಕನಿಷ್ಠ ೧೦-೧೫ ಮನೆಗಳಿಗೆ ಭೇಟಿಯಾಗಿ ಸಹಾಯ ಹಸ್ತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಿ ಎಐಸಿಸಿ ಕಂಟ್ರೋಲ್ ರೂಮ್ ಗೆ ರವಾನಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ಸುರೇಖಾ ವಾರೇಕರ್, ಎಂ.ಟಿ.ನಾಯ್ಕ, ಸಚಿನ್ ನಾಯ್ಕ, ಗೀತಾ ಭಂಡಾರ್ಕರ್, ನಿತ್ಯಾನಂದ ನಾಯ್ಕ, ದೀಪಕ್ ಭಂಡಾರಿ, ಶಿವಾನಂದ ನಾಯ್ಕ ಮುಂತಾದವರು ಹಾಜರಿದ್ದರು
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ