ಹಿರೇಗುತ್ತಿ: CAD ಪೌಂಡೇಶನ್ ಅಧ್ಯಕ್ಷರಾದ ಹಾಗೂ ಖ್ಯಾತ ಹೃದಯರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ಕಾರವಾರದಿಂದ ವಾಪಸ್ಸಾಗುತ್ತಿರುವಾಗ ಗುರುರಾಜ ನಾಯಕ ಹಿರೇಗುತ್ತಿ ಕೋರಿಕೆ ಮೇರೆಗೆ ಹಿರೇಗುತ್ತಿಗೆ ಭೇಟಿ ನೀಡಿ ಶ್ರೀ ಬ್ರಹ್ಮಜಟಗ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಮಯದಲ್ಲಿ ಹಿರೇಗುತ್ತಿಯ ಶ್ರೀ ಬ್ರಹ್ಮಜಟಗ ಯುವಕ ಸಂಘದವರು ಶಾಲು ಹೊದಿಸಿ ಸನ್ಮಾನಿಸಿದರು. ಡಾ.ಪದ್ಮನಾಭ ಕಾಮತರು ಈ ಮೊದಲು ತಮ್ಮ CAD ಪೌಂಡೇಶನ್ನ ಮೂಲಕ ಉತ್ತರ ಕನ್ನಡ ಜಿಲ್ಲೆಯ ಅನೇಕ ಸರ್ಕಾರಿ ಆಸ್ಪತ್ರೆಗೆ ಹಾಗೂ ಹಿರೇಗುತ್ತಿ ಹಾಸ್ಪಿಟಲಿಗೂ ಇ.ಸಿ.ಜಿ ಯಂತ್ರ ನೀಡಿರುತ್ತಾರೆ. ಇನ್ನೂ ಹೆಚ್ಚಿನ ವೈದ್ಯಕೀಯ ಸೌಲಭ್ಯ ನೀಡುವಂತೆ ಅವರಿಗೆ ಯುವಕ ಸಂಘದವರು ವಿನಂತಿಸಿದರು.
ಡಾ.ಪದ್ಮನಾಭ ಕಾಮತ್ರು “ಮುಂದಿನ ದಿನಗಳಲ್ಲಿ ಉತ್ತರಕನ್ನಡ ಜಿಲ್ಲೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ದೊರಕಿಸಿಕೊಡುವ ಇಚ್ಚೆ ಹೊಂದಿದ್ದೇನೆ” ಎಂದರು.
ಈ ಸಂದರ್ಭದಲ್ಲಿ ಕೆ.ಎಮ್.ಸಿ ಹಾಸ್ಪಿಟಲ್ ಡಾ. ಅಭಯ ಕಾಮತ್, ಡಾ.ಈಶ್ವರ್ ಕೀರ್ತಿ, ಡಾ.ಪುಂಡ್ಲೀಕ್ ಬಾಳಿಗಾ ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ಯುವಕ ಸಂಘದ ಅಧ್ಯಕ್ಷರಾದ ರಾಜು ಕೇ ಗಾಂವಕರ, ಚಂದ್ರಹಾಸ ನಾಯಕ, ರಾಮು ಕೆಂಚನ್, ಬೀರಣ್ಣ ಕೆಂಚನ್, ಆನಂದು ನಾಯಕ, ಚಂದ್ರಕಾAತ ಗಾಂವಕರ, ಎನ್ ರಾಮು ಹಿರೇಗುತ್ತಿ, ಸಂದೀಪ ಅಗಸಾಲಿ, ಶಾಂತಾ ನಾಯಕ ಸಗಡಗೇರಿ, ಕಮಲಾಕ್ಷ ಗಾಂವಕರ, ಗಣಪತಿ ಹಿತ್ತಲಮಕ್ಕಿ, ಮಂಜು ಪಾಟಿಲಿನ್, ಕಮಲಾಕರ ನಾಯಕ, ಗಣೇಶ ನಾಯಕ, ಮಾರುತಿ ನಾಯ್ಕ, ನಿತೀಶ ನಾಯಕ, ಎಚ್ ಎಸ್ ವಿಠ್ಠಲ, ಸಣ್ಣಪ್ಪ ನಾಯಕ ಉಪಸ್ಥಿತರಿದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ