ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ಕೋನೇಶ್ವರ ದೇವಾಲಯದಲ್ಲಿ, ಕೋನಳ್ಳಿ ಶಂಭು ನಾಯ್ಕರ ದೀಪೋತ್ಸವ ಸೇವೆಯು ಶ್ರದ್ಧಾ ಭಕ್ತಿಯಿಂದ ಜರುಗಿತು.
ಶಂಭು ನಾಯ್ಕರು ತಮ್ಮ ಮಡದಿಯ ಜೊತೆಗೂಡಿ ತೀರ್ಥ ಕ್ಷೇತ್ರಗಳಾದ ಕಾಶಿ, ತ್ರಿವೇಣಿ ಸಂಗಮ, ಅಯೋದ್ಯೆ, ಗಯಾ ಮುಂತಾದ ಪುಣ್ಯ ಕ್ಷೇತ್ರಗಳ ದರ್ಶನ ಪಡೆದು ಬಂದಿದ್ದಾರೆ.
ಈ ಯಾತ್ರೆ ಪೂರೈಸಿದ ಪ್ರಯುಕ್ತ ತಮ್ಮ ಸ್ವ-ಗೃಹದಲ್ಲಿ ದೇವರಕಾರ್ಯ ಹಾಗೂ ಭಜನಾ ಕಾರ್ಯಕ್ರಮ ಇಟ್ಟುಕೊಂಡಿದ್ದರು.
ನೆಂಟರಿಷ್ಟರು ಬಂಧು ಮಿತ್ರರೆಲ್ಲ ಶ್ರೀ ದೇವರ ಕಾರ್ಯದಲ್ಲಿ ಪಾಲ್ಗೊಂಡು, ಕಾಶಿಯಾತ್ರೆ ಪೂರೈಸಿದ ದಂಪತಿಗಳ ಆಶೀರ್ವಾದ ಪಡೆದು ಧನ್ಯರಾದರು.
ಭಜನಾ ಕಾರ್ಯಕ್ರಮದಲ್ಲಿ ಜನಪ್ರಿಯ ಯಕ್ಷಗಾನ ಮತ್ತು ಸಂಗೀತ ಕಲಾವಿದರಾದ ಜನಾರ್ಧನ್ ನಾಯ್ಕ್ ಹಿರೇಬೈಲ್ ಹಾಗೂ ನರಸಿಂಹ ಹರಡಸೆ ಹಾಡಿದರು. ಪ್ರದೀಪ್ ಭಂಡಾರಿ ತಬಲಾ ಸಾಥ್ ನೀಡಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ