ಕುಮಟಾ ತಾಲೂಕಿನ ಹಂದಿಗೋಣದ ಕೊಬ್ಬರಿ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರೂ ಹಾನಿಯಾಗಿದೆ .
ಕುಮಟಾ ತಾಲೂಕಿನ ಹಂದಿಗೋಣದ ರಾಮನಾಥ ಕೊಬ್ಬರಿ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ . ಪರಿಣಾಮ ಸುಮಾರು ೧೦ ಸಾವಿರ ಕೊಬ್ಬರಿಗಳು ಬೆಂಕಿಗೆ ಸುಟ್ಟು ಕರಕಲಾಗಿದೆ . ಪ್ಯಾಕ್ರ್ಟಿಯ ಮೇಲ್ಬಾವಣಿಯ ಸಿಮೇಂಟ್ ಶೀಟ್ಗಳು ಒಡೆದುಹೋಗಿದೆ . ಬೆಂಕಿ ಅನಾಹುತವನ್ನು ಗಮನಿಸಿದ ಪ್ಯಾಕ್ಟ್ರಿ ಪಕ್ಕದಲ್ಲಿರುವ ಗಜನಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ಯಾಕ್ರ್ಟಿ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ . ಮಾಲೀಕರು ನೀಡಿದ ಮಾಹಿತಿ ಮೇರೆಗೆ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಮೂಲಕ ಸಂಭವನೀಯ ಅಧಿಕ ಹಾನಿ ತಪ್ಪಿಸಿದ್ದಾರೆ . ಈ ಅಗ್ನಿ ಅವಘಡದಿಂದ ಸುಮಾರು ೪ ಲಕ್ಷ ರೂ . ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ . ಕೊಬ್ಬರಿಯನ್ನು ಮಶೀನ್ ಮೂಲಕ ಡ್ರೈ ಮಾಡುವ ಸಂದರ್ಭದಲ್ಲಿ ಕೊಬ್ಬರಿಯಲ್ಲಿದ್ದ ಬೆಂಕಿಯ ಕಿಡಿ , ಅಗ್ನಿ ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ . ಈ ಬಗ್ಗೆ ಕುಮಟಾ ಪೊಲೀಸ್ ಠಾಣೆ ಪ್ರಕರಣ ದಾಖಲೆಯಾಗಿದೆ
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!