May 14, 2024

Bhavana Tv

Its Your Channel

ಹಿರೇಗುತ್ತಿ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮ

ಕುಮಟಾ:- 2022 ನೇ ಸಾಲಿನ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸರ್ಕಾರದ ಆದೇಶದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನದಂತೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಹಮ್ಮಿಕೊಂಡ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಹಿರೇಗುತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಸೆಕೆಂಡರಿ ಹೈಸ್ಕೂಲ್ ಮೈದಾನದಲ್ಲಿ ಯಶಸ್ವಿಯಾಗಿ ಜರುಗಿತು.

ಮುಖ್ಯಾಧ್ಯಾಪಕರಾದ ರೋಹಿದಾಸ್ ಎಸ್ ಗಾಂವಕರ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತನಾಡಿದರು. ನಾಗಶ್ರೀ ಪಟಗಾರ ಮತ್ತು ಕಾಂಚಿಕಾ ನಾಯಕ ಸಂಗಡಿಗರು ಗೀತಗಾಯನ ಹಾಡಿದರು. ಸಂಕಲ್ಪ ವಿಧಿಯನ್ನು ದೈಹಿಕ ಶಿಕ್ಷಕರಾದ ನಾಗರಾಜ್ ನಾಯಕ ಬೋಧಿಸಿದರು. ಪ್ರಾಂಶುಪಾಲರಾದ ಅರುಣ ಹೆಗಡೆಯವರು ಎಲ್ಲರನ್ನು ವಂದಿಸಿದರು. ನೇತ್ರಾವತಿ ನಾಯಕ ಹಾಗೂ ಶಿಲ್ಪಾ ನಾಯಕ ರವರು ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ, ಉಪಾಧ್ಯಕ್ಷ ಶ್ರೀಕಾಂತ ನಾಯಕ ಹಾಗೂ ನಾಗೇಶ ಟಿ ನಾಯಕ ನೋಡಲ್ ಅಧಿಕಾರಿಗಳಾದ ಪ್ರವೀಣ ನಾಯಕ ಆರ್.ಎಫ್.ಓ ಹಿರೇಗುತ್ತಿ, ಶಿಕ್ಷಣ ಇಲಾಖೆಯ ನಿರೀಕ್ಷಕರಾದ ವಿನಾಯಕ ನಾಯ್ಕ ಹಾಗೂ ಹೈಸ್ಕೂಲ್ ಶಿಕ್ಷಕ ವೃಂದದವರು ಕಾಲೇಜಿನ ಉಪನ್ಯಾಸಕರು , ಬೋಧಕೇತರ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಹೈಸ್ಕೂಲ ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕನ್ನಡ ನಾಡು ನುಡಿಯ ಗೀತೆಯನ್ನು ಮನದುಂಬಿ ಹಾಡಿದರು. ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ ಹೈಸ್ಕೂಲ್ ಹಾಗೂ ಕಾಲೇಜಿನ ಅಧ್ಯಾಪಕರ ವೃಂದದವರಿಗೆ ಹೊನ್ನಪ್ಪ ಎನ್ ನಾಯಕ ಅಭಿನಂದಿಸಿದರು

error: