ಕುಮಟಾ : ಜನಸಾಮಾನ್ಯನನ್ನು ಗಮನದಲ್ಲಿರಿಸಿಕೊಂಡು ವಿಭಿನ್ನ ರೀತಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 30ರಂದು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಕುಮಟಾ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ವಿಜಯಶಾಲಿ ಪತ್ರಿಕೆಯ ಸಂಪಾದಕ ಸದಾನಂದ ದೇಶಭಂಡಾರಿ ಪತ್ರಿಕಾ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತ್ಯಿಕವಾಗಿ ತುಡಿತವುಳ್ಳ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನಿರ್ಲಕ್ಷಿಸದೇ, ಸೂಪ್ತ ಪ್ರತಿಭೆಗಳ ಅನಾವರಣಕ್ಕೆ ಹಾಗೂ ನಾಮಾಂಕಿತ ಸಾಹಿತಿಗಳನ್ನು ಆಧರಿಸುವ ಸದ್ಭಾವನೆಯಿಂದ “ಜನ ನುಡಿ” ಎಂಬ ಶೀರ್ಷಿಕೆಯಡಿ
ಉತ್ತರ ಕನ್ನಡ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಲಾಗುತ್ತಿದೆ, ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಸಾಧಕರಿಗೆ, ತಾಲೂಕಿಗೆ ಒಬ್ಬರಂತೆ “ಸಿರಿ ನೆಲ ರಾಜ್ಯೋತ್ಸವ
ಪುರಸ್ಕಾರ-2022 ” ನ್ನು ನೀಡಲಾಗುವುದು. ಈ ಸಮ್ಮೇಳನಕ್ಕೆ ನಾಡಿನ ಸಾಂಸ್ಕೃತಿಕ ಕೊಡುಗೈ ದಾನಿ ಆಗಿರುವ ಸುಬ್ರಾಯ ವಾಳ್ಕೆಯವರು ತಮ್ಮ ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದು ಸದಾನಂದ ದೇಶಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!