ಕುಮಟಾ: “ಕುಮಟಾ ವೈಭವ 2022” ನ.11 ರಿಂದ ನ.16 ವರೆಗೆ ಪಟ್ಟಣದ ಮಣಕಿ ಮೈದಾನದಲ್ಲಿ ವಿಜೃಂಭಣೆಯಿAದ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಾಂಡವ ಕಲಾ ನಿಕೇತನ ಅಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದರು.
ಅವರು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕುಮಟಾ ವೈಭವ ಕಾರ್ಯಕ್ರಮ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಜನತೆಗೆ ಹಾಲಕ್ಕಿ ಸಮುದಾಯವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ನ. 11 ರಂದು ಬೆಳಿಗ್ಗೆ 10.30 ರಿಂದ ಹಾಲಕ್ಕಿ ಚುಂಚಾದ್ರಿ ವಾಲಿಬಾಲ್ ಕಫ್ ಟೂರ್ನಾಮೆಂಟ್ ನಡೆಸಲಿದ್ದೇವೆ. ನ.12 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಲಿದೆ. 5 ದಿನ ಕಲಾವಿದರಿಗೆ ಮಾಶಾಸನ ನೀಡಲು ನಿರ್ಧರಿಸಿದ್ದೇವೆ. ಕನ್ನಡ ಮತ್ತು ಹಿಂದಿ ಚಿತ್ರದ ನಾಯಕರು ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಮಟಾ ವೈಭವ ಸಮಿತಿಯ ನಾಗೇಶ ನಾಯ್ಕ, ,ರವಿ ಶೇಟ್, ನಿರಂಜನ ನಾಯ್ಕ, ಸಚಿನ ಹರಿಕಂತ್ರ, ಮಂಜುನಾಥ ನಾಯ್ಕ ಕೋನಳ್ಳಿ, ಗಣೇಶ ನಾಯ್ಕ ಹೊದ್ಕೆ ಮಾರುತಿ ಸಂಕ್ಕೊಳ್ಳಿ ಸೇರಿದಂತೆ ಮತ್ತಿತರರು ಇದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ