April 26, 2024

Bhavana Tv

Its Your Channel

ಯಲ್ಲಾಪುರ ಪತ್ರಿಕಾ ವಿತರಕರಿಂದ ಮುಖ್ಯ ಮಂತ್ರಿಗಳಿಗೆ ಮನವಿ

ಯಲ್ಲಾಪುರ: -೧೫ವರ್ಷಗಳಿಂದ ಪತ್ರಿಕೆ ವಿತರಕರಾಗಿ ಮನೆ ಮನೆಗೆ ಪತ್ರಿಕೆ ಹಂಚುವ ಕಾರ್ಯ ಮಾಡುತ್ತಿದ್ದೇವೆ.
ಪ್ರಸ್ತುತ ಕೊರೋನಾ ಎಂಬ ಮಹಾಮಾರಿ ಎಲ್ಲೆಡೆಯಂತೆ ಕರ್ನಾಟಕ ರಾಜ್ಯವನ್ನೂ ಕಂಗೆಡಿಸಿದೆ. ಉಳಿದೆಲ್ಲ ವಲಯದಂತೆ ಪತ್ರಿಕಾ ವಿತರಕರು ಆರ್ಥಿಕವಾಗಿ ತುಂಬಾ ಸಂಕಷ್ಟ ದಲ್ಲಿದ್ದೇವೆ. ಇಂತಹ ವಿಷಮ ಸ್ಥಿತಿಯಲ್ಲಿ ಮನೆಮನೆಗೆ ಪತ್ರಿಕೆ ವಿತರಿಸುತ್ತಿರುವ ಪತ್ರಿಕಾ ಏಜೆಂಟರು, ವಿತರಕರು ಗಳನ್ನು ಸಹ ಫ್ರಂಟಲೈನ್ ವಾರಿಯರ್ಸ್ ಎಂದು ಘೋಷಿಸಬೇಕು. ತೀರಾ ಆರ್ಥಿಕ ಸಂಕಷ್ಟಕ್ಕೆ ಒಳಗಾದ , ಪತ್ರಿಕಾ ಏಜೆಂಟರು, ವಿತರಕರುಗಳಿಗೆ ವಿಶೇಷ ಆರ್ಥಿಕ ನೆರವು ಘೋಷಿಸಬೇಕು.ಕೋವಿಡ್ ನಿಂದ ಸಾವನ್ನಪ್ಪುವ ಪತ್ರಿಕಾ ಏಜೆಂಟರು, ವಿತರಕರುಗಳಿಗೂ ಪರಿಹಾರ ಒದಗಿಸಲು ಕ್ರಮ ಆಗಬೇಕು. ಈ ಎಲ್ಲ ಬೇಡಿಕೆಯನ್ನು ಇಡೀ ಪತ್ರಿಕಾ ವಿತರಕರ ಸಮೂಹದ ಒಕ್ಕೊರಳ ಬೇಡಿಕೆಯೆಂದು ಮನ್ನಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಗಳಿಗೆ ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರವರ ಮುಖಾಂತರ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ಜಯರಾಜ ಗೊವಿ, ಪ್ರಭಾವತಿ, ಅನೀಲ ಭಟ್ಟ, ವಿನಾಯಕ ವೇರ್ಣೇಕರ, ಪ್ರಶಾಂತ ಗೋಖಲೆ ಅಮೃತ ಹಂದೆ ಮುಂತಾದವರು ಉಪಸ್ಥಿತರಿದ್ದರು.

ವರದಿ: -ವೇಣಗೋಪಾಲ ಮದ್ಗುಣಿ

error: