April 27, 2024

Bhavana Tv

Its Your Channel

ಗುಡ್ಡ ಕುಸಿದ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತೆರವು

ಯಲ್ಲಾಪುರ : ಗುಡ್ಡ ಕುಸಿದ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ ಮೇಲಿನ ಮಣ್ಣನ್ನು ತೆರವುಗೊಳಿಸಲಾಗಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ.
ಗುರುವಾರ ಸಂಜೆ ಯಲ್ಲಾಪುರ ಅಂಕೋಲ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೬೩ ಅರಬೈಲ್ ಘಟ್ಟದಲ್ಲಿ ಗುಡ್ಡದ ಮಣ್ಣು ಕುಸಿದ ಪರಿಣಾಮ ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಗುಳ್ಳಾಪುರ ಕಡೆಗೆ ತೆರಳಿದ್ದ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ಕೂಡಲೇ ಜೆಸಿಬಿ ಹಾಗೂ ಇನ್ನಿತರ ವಾಹನಗಳನ್ನು ಸ್ಥಳಕ್ಕೆ ತರೆಸಿಕೊಂಡು ಇತರೆ ಇಲಾಖೆಗಳ ಸಹಕಾರದಿಂದ ರಸ್ತೆಯ ಒಂದು ಬದಿಗೆ ಮಣ್ಣನ್ನು ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸಹಕಾರ ನೀಡಿದರು

ವರದಿ: -ವೇಣಗೋಪಾಲ ಮದ್ಗುಣಿ

error: