May 3, 2024

Bhavana Tv

Its Your Channel

ಪ್ರವಾಹಕ್ಕೆ ಹಾನಿಯಾದ ಪ್ರದೇಶಗಳನ್ನು ಪರಿಶೀಲಿಸಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ

ಯಲ್ಲಾಪುರ: ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರು ತಾಲೂಕಿನ ಇಡಗುಂದಿ ಪಂಚಾಯತದ ಕೆಳಾಶೆಯ ಬಾಳೆಪಾಲ್ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹಕ್ಕೆ ಹಾನಿಯಾದ ಪ್ರದೇಶಗಳನ್ನು ಪರಿಶಿಲನೆ ಮಾಡಿದರು.ಇದು ಬುಡಕಟ್ಟು ಸಿದ್ದಿ ಜನರು ವಾಸಿಸುವ ಪ್ರದೇಶವಾಗಿದ್ದು ಆದ ಹಾನಿಗೆ ಉಸ್ತುವಾರಿ ಸಚಿವರ ಜೋತೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವಲ್ಲಿ ಪ್ರಯತ್ನಿಸಲಾಗುವುದು ಎಂದರು.
ನಂತರ ಅತ್ತಿಸಾವಲು ವೆಂಕಟ್ರಮಣ ಭಟ್ ಅವರ ಮನೆಗೋಡೆಯ ಮೇಲೆ ಗುಡ್ಡ ಕುಸಿದಿದ್ದು ಅದರ ಪರಿಶಿಲನೆ ನಡೆಸಿದರು.
ಈ ಸಂದರ್ಭದಲ್ಲಿ ಜೀವನ್ ವಿಕಾಸ ಟ್ರಸ್ಟ್ ಹಾಗೂ ಎಸ್.ಟಿ ಮೊರ್ಚ ಜಿಲ್ಲಾ ಕಾರ್ಯದರ್ಶಿ ಗಳಾದ ಶ್ರೀ ಸುರೇಶ ಸಿದ್ದಿ,ವನವಾಸಿ ಕಲ್ಯಾಣದ ರಾಮನಗರ ಜಿಲ್ಲಾ ಪ್ರಮುಖರಾದ ಕುಮಾರ ವಿಠ್ಠಲ ತಾಟೆ, ಶಂಕರ ಸಿದ್ದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ವೇಣುಗೋಪಾಲ ಮದ್ಗುಣಿ

error: