May 3, 2024

Bhavana Tv

Its Your Channel

ಅತ್ಯಾಚಾರ ಆರೋಪಿಗೆ ಶಿಕ್ಷೆ ಪ್ರಕಟ

ಯಲ್ಲಾಪುರ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ನಿರಂತರ ಅತ್ಯಾಚಾರ ನಡೆಸಿದ್ದ ತಾಲ್ಲೂಕಿನ ಬಾಳೇಜಡ್ಡಿಯ ಆರೋಪಿ ರಾಘವೇಂದ್ರ ಮಂಜ್ಯಾ ಚಲವಾದಿ(೨೪)ಯ ಅಪರಾಧ ಸಾಭಿತಾದ ಹಿನ್ನಲೆಯಲ್ಲಿ ಆರೋಪಿಗೆ ಕಾರವಾರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶ ಶಿವಾಜಿ ನಲವಡೆ ಇವರು ೧೧ ವರ್ಷ ಕಠಿಣ ಶಿಕ್ಷೆ ಹಾಗೂ ೨೫ ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಬಾಳೆಜಡ್ಡಿಯ ಆರೋಪಿ ರಾಘವೇಂದ್ರನ ಅಕ್ಕನ ಮದುವೆ ತಯಾರಿಗೆಂದು ಬಂದಿದ್ದ ಆರೋಪಿಯ ಮಗಳನ್ನು ಒತ್ತಾಯ ಪೂರ್ವಕವಾಗಿ ಆಮಿಷ ತೋರಿಸಿ,ನಂಬಿಸಿ ನಿರಂತರ ೮ ದಿನಗಳ ಕಾಲ ಅತ್ಯಾಚಾರ ನಡೆಸಿದ್ದರ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ರಿ ಪ್ರಕರಣದಲ್ಲಿ ಸರ್ಕರಿ ಅಭಿಯೋಜಕರಾದ ಸುಭಾಷ ಕೈರನ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವರದಿ: ವೇಣುಗೋಪಾಲ ಮದ್ಗುಣಿ

error: