May 17, 2024

Bhavana Tv

Its Your Channel

ಲಾರಿಯಲ್ಲಿ ಸರಕು ಸಾಗಾಣಿಕೆಯ ಹಮಾಲಿ ವೆಚ್ಚವನ್ನು ಸರಕಿನ ಮಾಲಿಕರೇ ಭರಿಸಲಿ

ಯಲ್ಲಾಪುರ:- ಲಾರಿಯಲ್ಲಿ ಸರಕುಗಳನ್ನು ಏರಿಸುವುದು ಮತ್ತು ಇಳಿಸುವದಕ್ಕೆ ವಾರ್ನಿ ಮಾಮೂಲಿ ಹೆಸರಿನಲ್ಲಿ ಮಾಲಿಕರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಹಾಗೂ ಸರಕಿನ ಮಾಲಿಕರೇ ಹಮಾಲಿ ವೆಚ್ಚವನ್ನು ಭರಿಸಬೇಕೆಂದು, ನಮ್ಮ ಸಮಿತಿಯ ತಿರ್ಮಾನವಾದಂತೆ ಸೋಮವಾರ ಲಾರಿಯ ಮಾಲಿಕರು ಯಾವುದೇ ವಾರ್ನಿ ಮಾಮೂಲಿಯನ್ನು ನೀಡುವುದಿಲ್ಲ. ಈ ಬಗ್ಗೆ ಯಲ್ಲಾಪುರ ತಾಲೂಕಾ ಲಾರಿ ಮಾಲೀಕರ ಸಂಘ ಹಾಗೂ ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದವರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರವರನ್ನು ಭೇಟಿಯಾದರು..
ಯಲ್ಲಾಪುರ ಲಾರಿ ಮಾಲೀಕರ ಸಂಘದ ಪ್ರಮುಖರಾದ ನವೀನ ನಾಯ್ಕ, ನಾಗೇಂದ್ರ ಭಟ್ಟ, ಸುಜಯ ಮರಾಠೆ, ಖಾಜಾ ಅತ್ತಾರ, ಮುರಳಿ ರಾವಲ, ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದ ಪ್ರಮುಖರಾದ ಗಯಬು ಹೊನ್ನಾಳಿ, ಗಂಗಾಧರ ಹೊಸಮನಿ, ಪ್ರಭಾಕರ ಉಪಾಧ್ಯ ಉಪಸ್ಥಿತರಿದ್ದರು..

ವರದಿ: ವೇಣುಗೋಪಾಲ ಮದ್ಗುಣಿ

error: