May 17, 2024

Bhavana Tv

Its Your Channel

ಯಲ್ಲಾಪುರದ ಜೀವ ವಿಮಾ ನಿಗಮದಲ್ಲಿ ಸಾಧನೆಗೈದವರಿಗೆ ಸನ್ಮಾನ – ಶಾಖಾಧಿಕಾರಿ ವಿ.ಜಿ.ಹೆಗಡೆ

ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ :- ನಮ್ಮ ಭಾರತೀಯ ಜೀವ ವಿಮಾ ನಿಗಮ ೬೫ ವರ್ಷಗಳನ್ನು ದಾಟಿ ೬೬ ನೆಯವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಪ್ರತಿನಿಧಿಗಳಿಗಾಗಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಮಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿದ್ಯಾಥಿಗಳಿಗೆ ಹಲವು ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡುತ್ತಿದ್ದೇವು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಅವುಗಳನ್ನು ರದ್ದುಗೊಳಿಸಿ, ಕೇವಲ ಸಾಧನೆ ಮಾಡಿದ ಪ್ರತಿನಿಧಿಗಳನ್ನು ಗೌರವಿಸುತ್ತಿದ್ದೇವೆ ಎಂದು ಶಾಖಾಧಿಕಾರಿ ವಿ.ಜಿ.ಹೆಗಡೆ ಹೇಳಿದರು.ಅವರು ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಯಲ್ಲಾಪುರ ಶಾಖಾ ಕಚೇರಿಯಲ್ಲಿ ಹಮ್ಮಿಕೊಂಡ ಸಪ್ತಾಹ ಸಮಾರೋಪದಲ್ಲಿ ಪ್ರತಿನಿಧಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಸಾಂದರ್ಭಿಕ ಮಾತನಾಡಿದರು.
ಸಹಾಯಕ ಆಡಳಿತಾಧಿಕಾರಿ ಡಿ.ಪಿ.ಜೋಗಳೇಕರ್, ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಕಣಗಿಲ್, ಕಚೇರಿ ಸಹಾಯಕರಾದ ಸುಧೀಂದ್ರ ಪೈ, ಮೈಕಲ್, ಪ್ರತಿನಿಧಿಗಳಾದ ಡಿ.ಜಿ.ಶೆಟ್ಟಿ, ರಾಘವೇಂದ್ರ ಪೂಜಾರಿ, ಅಣ್ಣಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.ಸಹಾಯಕ ಆಡಳಿತಾಧಿಕಾರಿ ಪ್ರವೀಣ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಭಿವೃದ್ಧಿ ಅಧಿಕಾರಿ ಮಧುಕೇಶ್ವರ ಹೆಗಡೆ ವಂದಿಸಿದರು.

error: