ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಉಮ್ಮಚ್ಗಿ ಪಂಚಾಯತ ವ್ಯಾಪ್ತಿಗೆ ಬರುವ ಬಾಳೆಗದ್ದೆ ಅಂಗನವಾಡಿ ಕೇಂದ್ರದಲ್ಲಿ ಹದಿನಾಲ್ಕಕ್ಕೂ ಹೆಚ್ಚು ಮಕ್ಕಳು ಹಾಜರಿರುತ್ತಾರೆ. ೨೦೦೭-೮ನೇ ಸಾಲಿನ ಹನ್ನೆರಡನೇ ಹಣಕಾಸು ಯೋಜನೆಯ ಅಡಿಯಲ್ಲಿ ಮಂಜೂರಾದ ಹಣದಿಂದ ನಿರ್ಮಿಸಲಾದ ಈ ಕೇಂದ್ರವು ಈಗ ಸಂಪೂರ್ಣ ಹಾಳಾದ ಸ್ಥಿತಿಗೆ ತಲುಪುತ್ತಿದ್ದು, ಮಳೆಗಾಲದಲ್ಲಿ ಮಕ್ಕಳ ತಲೆ ಮೇಲೆ ಬಿದ್ದರೆ ಎಂಬ ಆತಂಕ ಸೃಷ್ಟಿಸುವಂತಾಗಿದೆ.
ಅAಗನವಾಡಿ ಕೇಂದ್ರದ ನೆಲ ಕಿತ್ತು ಹಾಳಾಗಿರುವುದಲ್ಲದೆ, ಮೇಲ್ಮನೆಯಲ್ಲಿ ಕೂಡ ಫಕಾಸಿ,ರೀಪುಗಳು ಲಡ್ಡಾಗಿ ಯಾವುದೇ ವೇಳೆಯಲ್ಲಿ ಬೀಳುವ ಸಂಭವವಿದೆ. ಶಾಸಕರೂ, ಕಾರ್ಮಿಕ ಮಂತ್ರಿಗಳೂ ಆದ, ಎಸ್.ಎಂ.ಹೆಬ್ಬಾರವರ ಗಮನಕ್ಕೆ ಇದನ್ನು ತರಲಾಗಿದ್ದು, ಹೊಸ ಅಂಗನವಾಡಿ ಕಟ್ಟಡಕ್ಕಾಗಿ ಪ್ರಯತ್ನ ನಡೆಸಲಾಗುತ್ತಿದೆ. ಊರಿನಲ್ಲಿ ಬೇರೆಯಾವುದೇ ಸರಕಾರಿ ಕಟ್ಟಡ ಇಲ್ಲದ ಕಾರಣ ಅಂಗನವಾಡಿ ಕಟ್ಟಡ ಜರೂರಾರಾಗಿ ಮಂಜೂರಾಗಬೇಕಿದೆ ಎಂದು ಉಮ್ಮಚ್ಗಿ ಗ್ರಾಮ ಪಂಚಾಯತ ಸ್ಥಳೀಯ ಸದಸ್ಯ ಗಣಪತಿ ಬಾಳೆಗದ್ದೆಯವರು ಒತ್ತಾಯಿಸಿದ್ದಾರೆ.
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ