April 29, 2024

Bhavana Tv

Its Your Channel

ಯಲ್ಲಾಪುರದ ನ್ಯಾಯಾಲಯದಲ್ಲಿ ಹಿರಿಯ ನಾಗರಿಕರ ಸಬಲೀಕರಣ ಅಭಿಯಾನ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಈ ದಿನ ಅಕ್ಟೋಬರ್ ೩೧ರಂದು ಪಟ್ಟಣದ ನ್ಯಾಯಾಲಯದ ಆವಾರದಲ್ಲಿ ನ್ಯಾ.ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ಕಾನೂನು ಅರಿವು ನೆರವು ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಭಿಯಾನಕ್ಕೆ ಚಾಲನೆ ನೀಡಿದರು.ಸರ್ವೋಚ್ಚ ನ್ಯಾಯಾಲಯದ ಹಾಗೂ ಘನ ಸರಕಾರದ ಆಶಯದ ಇತರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವಾಗಬೇಕು ಎನ್ನವ ಉದ್ದೇಶದಿಂದ ಅಕ್ಟೋಬರ ೩೧ ರಿಂದ ನವೆಂಬರ ೧೩ರವರೆಗೆ ಹಿರಿಯ ನಾಗರಿಕರ ಸಬಲಿಕರಣ ಅಭಿಯಾನ ನಡೆಯಲಿದ್ದು,ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿ ಈ ಕಾರ್ಯಕ್ರಮದ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ನುಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಗ್ರೇಡ್ ೨ ಸಿ.ಜಿ.ನಾಯ್ಕ,ವಕೀಲರ ಸಂಘದ ಅಧ್ಯಕ್ಷರಾದ ಆರ್.ಕೆ.ಭಟ್,ಹಿರಿಯ ವಕೀಲರಾದ ಎನ್.ಕೆ.ಭಾಗ್ವತ,ಕೆ.ಎನ್.ಹೆಗಡೆ, ಮುಂತಾದವರು, ಸಹಾಯಕ ಸರಕಾರಿ ಅಭಿಯೋಜಕಿ ಝಿನತ್ ಭಾನು ಶೇಖ್,ಶಿಶುಅಭಿವೃಧ್ದಿ ಇಲಾಖೆಯ ಅಧಿಕಾರಿಗಳು,ಆರಕ್ಷಕ ಅಧಿಕಾರಿಗಳು, ಭಾಗವಹಿಸಿದ್ದರು. ಪ್ಯಾರಾಲೀಗಲ್ ವಾಲಂಟಿಯರ್ ಸಂಜೀವಕುಮಾರ ಹೊಸ್ಕೇರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

error: