May 3, 2024

Bhavana Tv

Its Your Channel

ಇಂದು ಮತ್ತು ನಾಳೆ ಎರಡು ದಿನಗಳ ರಾಜ್ಯ ಮಟ್ಟದ ವಿಚಾರಗೋಷ್ಠಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಸೆಂಟರ್ ಫಾರ್ ಮಲ್ಟಿ ಡಿಸಿಪ್ಲಿನರಿ ಡೆವಲಪ್ಟೆಂಟ್ ರಿಸರ್ಚ್ ಸಂಸ್ಥೆ (ಸಿ ಎಮ್ ಡಿ ಆರ್) ಧಾರವಾಡ ರಾಷ್ಟ್ರ ಮಟ್ಟದ ಸಂಶೋಧನ ಸಂಸ್ಥೆಯಾದ ಭಾರತೀಯ ಸಮಾಜ ವಿಜ್ಞಾನ ಸಂಶೋಧನ ಕೇಂದ್ರ (ಐಸಿಎಸ್ ಎಸ್ ಆರ್) , ನವಹೆದಲಿಯ ಇದರ ಒಂದು ಅಂಗ ಸಂಸ್ಥೆಯಾಗಿದ್ದು, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೃಷಿ ಆರೋಗ್ಯ ಶಿಕ್ಷಣ ಮತ್ತು ಇತರೆ ವಿಷಯಗಳ ಕುರಿತು ಅನೇಕ ಸಂಶೋಧನಾ ಅಧ್ಯಯನ, ವಿಚಾರ ಸಂಕಿರಣ, ಮತ್ತು ತರಬೇತಿ ಕಾರ್ಯಕ್ರಮವನ್ನು ಕೈಗೊಳ್ಳುತ್ತದೆ.
ಇದರ ಒಂದು ಭಾಗವಾಗಿ ಕರ್ನಾಟಕದಲ್ಲಿ ಪಂಚಾಯತ್ ಸಂಸ್ಥೆಗಳ ಸಮಸ್ಯೆಗಳು, ಮತ್ತು ಮಾರ್ಗೋಪಾಯಗಳ ಕುರಿತು, ಎರಡು ದಿನಗಳ ರಾಜ್ಯ ಮಟ್ಟದ ವಿಚಾರಗೋಷ್ಠಿಯನ್ನು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಕೇಂದ್ರ ನವದೆಹಲಿ ಸಹಯೋಗದೊಂದಿಗೆ ಇವತ್ತು ಹಾಗೂ ನಾಳೆ ಸಿ ಎಮ್ ಡಿ ಆರ್ ಸಂಸ್ಥೆಯಲ್ಲಿ ಕೈಗೊಳ್ಳಲಾಗಿದೆ. ಈ ರಾಜ್ಯ ಮಟ್ಟದ ವಿಚಾರಗೋಷ್ಠಿಯಲ್ಲಿ ರಾಜ್ಯದ ಹಾಗೂ ರಾಷ್ಟ್ರದ ವಿವಿಧ ಭಾಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಅಧಿಕಾರಿಗಳು, ಸಂಶೋಧಕರು, ಪಂಚಾಯತ್ ಪ್ರತಿಭೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳ ಸಿಬ್ಬಂದಿಗಳು ಭಾಗವಹಿದ್ದಾರೆ.
ಸದರಿ ಕಾರ್ಯಕ್ರಮದಲ್ಲಿ.ಪ್ರಮೋದ ಹೆಗಡೆ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಇವರು ಮುಖ್ಯ ಆತಿಥಿಗಳಾಗಿ ಭಾಗವಹಿಸಿ ಕರ್ನಾಟಕ ಪಂಚಾಯತ್ ರಾಜ ವ್ಯವಸ್ಥೆ ಹಾಗೂ ವಿಕೇಂದ್ರೀಕರಣ ಕುರಿತು ವಿಚಾರ ಮಂಡಿಸಲಿದ್ದಾರೆ .

error: