April 30, 2024

Bhavana Tv

Its Your Channel

ಕಾರ್ಗಿಲ್ ವಿಜಯ ದಿವಸ: ವೀರ ಯೋಧರಿಗೆ ಸನ್ಮಾನ

ಯಲ್ಲಾಪುರ: ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ತಾಲೂಕಿನ ಕರಡೊಳ್ಳಿಯ ಒಂದೆ ಮನೆಯ ಇಬ್ಬರು ವೀರ ಯೋಧರು, ವನವಾಸಿ ಕಲ್ಯಾಣದ ಹಳೆಯ ವಿದ್ಯಾರ್ಥಿಗಳು ಆದ ಧೂಳು ಸಿಂಧೆ ಮತ್ತು ಶ್ಯಾಮು ಸಿಂಧೆ ಹಾಗೂ ಅವರ ತಂದೆ-ತಾಯಿಯವರನ್ನು ಸನ್ಮಾನಿಸಿ ಗೌರವವನ್ನು ಸಲ್ಲಿಸಿ ಮಾತನಾಡಿದ ಅವರು ನಮ್ಮ ಸಂಸ್ಥೆಯಾದ ವನವಾಸಿ ಕಲ್ಯಾಣದಲ್ಲಿ ವಿಧ್ಯಾಭ್ಯಾಸ ಮಾಡಿದ ಅನೇಕ ವಿಧ್ಯಾರ್ಥಿಗಳು ಸೈನ್ಯದಲ್ಲಿ ಸೇರಿ ದೇಶ ಸೇವೆ ಸಲ್ಲಿಸುತ್ತಿರುವುದರ ಬಗ್ಗೆ ತಮಗೆ ಹೆಮ್ಮೆಯಿದೆ ಎಂದರು, ವೀರ ಯೋಧರ ಸ್ನೇಹಿತರು ಮಾತನಾಡಿ ಅದೆಷ್ಟೊ ಕಷ್ಟಗಳನ್ನು ದಾಟಿ ಇಬ್ಬರು ವಿಧ್ಯಾಭ್ಯಾಸ ಮುಗಿಸಿ ಇಂದು ವೀರಯೋಧರಾಗಿ ದೇಶ ಸೇವೆ ಸಲ್ಲಿಸುತ್ತಿರುವುದು ನಮಗೆ ಆದರ್ಶವಾಗಿದೆ ಎಲ್ಲಾ ಯುವಕರು ಇವರಿಂದ ಪ್ರೇರಣೆಗೊಳ್ಳಬೇಕೆಂದರು.
ಯೋಧರು ಮಾತನಾಡಿ ದೇಶ ಸೇವೆ ಸಲ್ಲಿಸುವುದಷ್ಟು ಸಂತೋಷದ ವಿಷಯ ಇನ್ನೊಂದಿಲ್ಲ ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಜಿ.ಎನ್.ಗಾಂವ್ಕರ, ವನವಾಸಿ ಕಲ್ಯಾಣ ಪ್ರಾಂತ ಹಿತರಕ್ಷ ಪ್ರಮುಖ ದೊಂಡು ಪಾಟೀಲ, ಜಿಲ್ಲಾ ಎಸ್.ಟಿ. ಮೋರ್ಚ ಕಾರ್ಯದರ್ಶಿ ಸುರೇಶ್ ಸಿದ್ದಿ, ಪಂಚಾಯತ ಸದಸ್ಯರಾದ ವಿಠ್ಠಲ ಶೆಳ್ಕೆ, ಸುನೀಲ ಕಾಂಬಳೆ, ಬಾಪು ತಾಠೆ, ಮಹೇಶ ದೇಸಾಯಿ,ಪ್ರಮುಖರಾದ ವಿಠ್ಠಲ ಪಾಂಡ್ರಮಿಶೆ,ವಿಠ್ಠಲ,ಚAದು,ರಜತ ಖಾನಾಪುರಿ,ಶಂಕರ ಡೊಮಗೇರಿ,ಹಾಗೂ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ವೇಣುಗೋಪಾಲ ಮದ್ಗುಣಿ

error: