ನಾಗಮಂಗಲ . ಸೆ.೧೭. ವಿಶ್ವಕರ್ಮ ಸಮುದಾಯವು ಸಂಘಟನಾತ್ಮಕವಾಗಿ ಬೆಳೆಯಲು ಹಾಗೂ ನಮ್ಮ ಸಮುದಾಯವನ್ನು ಗುರುತಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಒಗ್ಗಟ್ಟಿನ ಅಗತ್ಯತೆ ಇದ್ದರೆ ಅಭಿವೃದ್ಧಿಯತ್ತ ಸಾಗಲು ಸಾಧ್ಯವೆಂದು ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಕೃಷ್ಣಚಾರ್ ತಿಳಿಸಿದರು .
ಅವರಿಂದು ನಾಗಮಂಗಲ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಕೇವಲ ಕುಸುರಿ ಕೆಲಸವಸ್ಥೆ ಅಲ್ಲದೆ ತಮ್ಮ ಗಳ ಹಾಗೂ ಸಮುದಾಯದ ಚಿಂತನಾಶಕ್ತಿ ಮೈಗೂಡಿಸಿಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಮಾತನಾಡುತ್ತಿದ್ದರು .
ನಮ್ಮ ಸಮುದಾಯದ ನಾಯಕರುಗಳು ಜಯಂತೋತ್ಸವ ಆಚರಣೆ ಮಾಡಲು ಸತತ ಪ್ರಯತ್ನ ದೊಂದಿಗೆ ಇಂದು ರಾಜ್ಯಾದ್ಯಂತ ಆಚರಣೆ ಮಾಡುತ್ತಿದ್ದು ಇಂತಹ ಶಕ್ತಿ ಹಾಗೂ ಸಮುದಾಯದ ಬೆಳವಣಿಗೆಯನ್ನು ಕೊಂಡೊಯ್ಯಲು ನಾವುಗಳು ಒಗ್ಗಟ್ಟಿನ ಶಕ್ತಿ ಅಗತ್ಯತೆ ಎಂದು ತಿಳಿಸಿದರು .
ನಮ್ಮ ಸಮುದಾಯದ ಪರಂಪರೆಯನ್ನು ನಮ್ಮ ಮಕ್ಕಳು ನಮಗೆ ಸೀಮಿತವಾಗಿರದೆ ಒಟ್ಟಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವ ಮುಖಾಂತರ ಬದುಕಿಗೆ ವೃತ್ತಿ ಜೀವನಕ್ಕೆ ವಿದ್ಯೆ ಎರಡನ್ನು ನಾವುಗಳು ಕೊಂಡೊಯ್ಯುವ ಮುಖಾಂತರ ನಮ್ಮ ಸಮುದಾಯದ ಏಳಿಗೆಗೆ ವಿಶ್ವಕರ್ಮ ಪರಂಪರೆಗೆ ನಮ್ಮಗಳ ಸೇವೆ ಅನನ್ಯವಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.
ಇದೇ ವೇಳೆ ತಾಲೂಕು ಆಡಳಿತ ವಿಶ್ವಕರ್ಮ ಗುರುವಿಗೆ ಪುಷ್ಪನಮನ ಸಲ್ಲಿಸಿದರು ಈ ಸಂದರ್ಭದಲ್ಲಿ ತಾಲೂಕು ಉಪ ತಹಸಿಲ್ದಾರಾದ ಭಾಗ್ಯಮ್ಮ ಹಾಗೂ ಇಲಾಖಾಧಿಕಾರಿಗಳು ಹಾಗೂ ವಿಶ್ವಕರ್ಮ ಸಂಘದ ಪದಾಧಿಕಾರಿಗಳು ಇತರರು ಹಾಜರಿದ್ದರು .
ದೇವಲಾಪುರ ಜಗದೀಶ್ ನಾಗಮಂಗಲ
More Stories
ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ