ಹೊನ್ನಾವರ: ಅಮೃತಮಹೋತ್ಸವದ ಪ್ರಯುಕ್ತ ಮಂಕಿಯ ಸೇವಾನಿರತ ಮತ್ತು ನಿವೃತ್ತ ಸೈನಿಕರ ತಂಡ “ಸಂಗ್ರಾಮದಿAದ 75 ರ ಸಂಭ್ರಮದೆಡೆಗೆ” ಎಂಬ ಅಪ್ಪಟ ದೇಶಪ್ರೇಮ ಸಾರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಅದರ ಅಂಗವಾಗಿ ಶಿಸ್ತುಬದ್ಧ ಬೈಕ್ ರ್ಯಾ ಲಿಯ ಮೂಲಕ ತಾಯಿ ಭಾರತಾಂಬೆಯ ಜೈಕಾರದೊಂದಿಗೆ ಮಂಕಿಯ ಪಟ್ಟಣ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ತೆರಳಿ ದೇಶದ ಮುಂದಿನ ಭವಿಷ್ಯ ವಾಗಿರುವ ಮಕ್ಕಳಿಗೆ ಸಿಹಿಹಂಚಿ ಅವರಲ್ಲಿ ರಾಷ್ಟ್ರಭಕ್ತಿಯ ಕುರಿತು, ಭಾರತೀಯ ಸೇನೆಯ ಕುರಿತು ಜಾಗೃತಿ ಮೂಡಿಸಲಾಯಿತು.ಈ ಸ್ವಾತಂತ್ರ್ಯದ ಕುರಿತಾದ ಕಾರ್ಯಕ್ರಮಕ್ಕೆ ದಾರಿಯೂದ್ದಕ್ಕೂ ನೆರೆದ ಊರ ನಾಗರಿಕರು ಅದ್ಭುತ ಸ್ವಾಗತ ಕೋರಿದರು..
ಸೈನಿಕರಾದ ಉಲ್ಲಾಸ್ ನಾಯ್ಕ, ರಾಜು ನಾಯ್ಕ, ಗಣೇಶ ನಾಯ್ಕ, ನಾಗರಾಜ್ ನಾಯ್ಕ, ಅರುಣ್ ನಾಯ್ಕ, ದೇವಪ್ಪ ನಾಯ್ಕ,ಸತೀಶ್ ನಾಯ್ಕ,ನೀರಜ್ ನಾಯ್ಕ ಮತ್ತು ಪೋಲಿಸರಾದ ಸುಧಾಕರ ನಾಯ್ಕ ,ಸ್ವಾತಂತ್ರ್ಯ ಹೋರಾಟಗಾರರು,ಶಿಕ್ಷಕರು,ಹಿರಿಯರು,ಊರ ನಾಗರಿಕರು ಉಪಸ್ಥಿತರಿದ್ದರು.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್