May 4, 2024

Bhavana Tv

Its Your Channel

75 ನೇ ಸ್ವಾತಂತ್ರ‍್ಯೋತ್ಸವ ಅಮೃತ ಮಹೋತ್ಸವದ ಅಭಿಯಾನದಡಿ ಹಳದಿಪುರದಲ್ಲಿ ಪಂಜಿನ ಮೆರವಣಿಗೆ

ಹೊನ್ನಾವರ:- ಅಖಂಡ ಭಾರತ ಸಂಕಲ್ಪ ನಿಮಿತ್ತ 75 ನೇ ಸ್ವಾತಂತ್ರ‍್ಯೋತ್ಸವ ಅಮೃತ ಮಹೋತ್ಸವದ ಅಭಿಯಾನದಡಿ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಸಮಸ್ತ ದೇಶಭಕ್ತರಿಂದ ಪಂಜಿನ ಮೆರವಣಿಗೆ ಆಯೋಜಿಸಲಾಗಿತ್ತು.

ಅಪಾರ ಸಂಖ್ಯೆಯಲ್ಲಿ ದೇಶಭಕ್ತರು ಬಂದು ದೇಶಪ್ರೇಮವನ್ನು ಮೆರೆದರು. ನಿವೃತ್ತ ಶಿಕ್ಷಕ ಎಚ್. ಎನ್. ಪೈ ಪಂಜಿನ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಹಳದೀಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ನಾಯ್ಕ್ ಸೇರಿದಂತೆ ಉಪಾಧ್ಯಕ್ಷರು ಹಾಗೂ ಸದಸ್ಯರೆಲ್ಲ ಹಾಜರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೆರವಣಿಗೆಯು ಬಡಗಣಿ ಗೋಪಾಲಕೃಷ್ಣ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಸಾಗಿ ಹಳದಿಪುರ ಕೇಶವ ದೇವಸ್ಥಾನ ಸಾಗಿ, ಪುನಃ ಅದೇ ಮಾರ್ಗವಾಗಿ ತೆರಳಿ ಬಡಗಣಿ ದೇವಸ್ಥಾನದ ಆವರದಲ್ಲಿ ರಾಷ್ಟ್ರಗೀತೆ ಹಾಡಿ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಸಂಪನ್ನಗೊAಡಿತು. ಮೆರವಣಿಗೆಯುದ್ಧಕ್ಕೂ ಹೊನ್ನಾವರ ಆರಕ್ಷಕ ಠಾಣೆಯ ಸಿಬ್ಬಂದಿಗಳು ಹಾಜರಿದ್ದು ಅಚ್ಚುಕಟ್ಟಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿ ಗ್ರಾಮಸ್ಥರ ಹಾಗೂ ದೇಶಭಕ್ತರ ಮೆಚ್ಚುಗೆಗೆ ಸಾಕ್ಷಿಯಾದರು.

ವರದಿ: ನರಸಿಂಹ ನಾಯ್ಕ್ ಹರಡಸೆ.

error: