April 26, 2024

Bhavana Tv

Its Your Channel

ಭಟ್ಕಳ ಜೈ ಮಾರುತಿ ರಕ್ತದಾನಿ ಬಳಗ; ರಕ್ತದಾನ ಮಾಡುವ ಮೂಲಕ ಮಹಿಳೆಯ ಜೀವ ಉಳಿಸಿದ ಬಳಗ

ಭಟ್ಕಳ ಜೈ ಮಾರುತಿ ರಕ್ತದಾನಿ ಬಳಗದ ಸದಸ್ಯರು ಕ್ಯಾನ್ಸರ್ ಪೀಡಿತ ಮಹಿಳೆಯರೊರ್ವರಿಗೆ ೧೫ ಯೂನಿಟ್ ರಕ್ತದಾನ ಮಾಡುವ ಮೂಲಕ ಮಹಿಳೆಯ ಜೀವ ಉಳಿಸಿದ ಪ್ರಕರಣ ಮಣಿಪಾಲ ಕೆಎಂಸಿಯಲ್ಲಿ ಮಂಗಳವಾರ ನಡೆದಿದೆ.

ಕುಮಟಾದ ಹೆಗಡೆ ಗ್ರಾಮದ ೪೫ವರ್ಷ ವಯಸ್ಸಿನ ಮಹಿಳೆಯೊರ್ವರು ಬ್ಲಡ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಶಸ್ತç ಚಿಕಿತ್ಸೆಗೆ ೧೫ ಯೂನಿಟ್ ರಕ್ತದ ಅವಶ್ಯಕತೆ ಇತ್ತು. ಮಹಿಳೆಯ ಪುತ್ರ ರಕ್ತದಾನಿ ಸಂಘಟನೆಗೆ ವಿನಂತಿಸಿದ್ದು ರಕ್ತ ನೀಡಿ ಜೀವ ಉಳಿಸಿ ತಂಡದ ಭಟ್ಕಳದ ಜೈ ಮಾರುತಿ ರಕ್ತದಾನಿ ಬಳಗ ರಕ್ತದಾನ ಮಾಡಿ ಮುಂದಿನ ಚಿಕಿತ್ಸೆಗೆ ನೇರವಾಗಿದ್ದಾರೆ. ಸಾಮಾಜಿಕ ಜಾಲತಾಣದ ಸದ್ಬಳಕೆಯಿಂದ ಮಹಿಳೆಯೊರ್ವರಿಗೆ ಸಕಾಲದಲ್ಲಿ ರಕ್ತ ಲಭಿಸಿರುವದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಕೌಶಿಕ್ ಆನೆಗುಡ್ಡೆ, ಶಿವಾನಂದ ಕೋಟೆಶ್ವರ, ಪ್ರಕಾಶ ಹಿಲ್ಲೂರು, ಗಣೇಶ ದೇವಾಡಿಗ, ನಾಗರಾಜ ರಾಮಚಂದ್ರ ದೇವಾಡಿಗ, ಚಂದ್ರಕಾoತ ನಾಯ್ಕ ಬಳಕೂರ, ಸಂದೇಶ ಹರಿಕಂತ್ರ, ಮಂಗೇಶ ದೇವಾಡಿಗ, ಮಣಿ ಕಂಠ ಹರಿಕಂತ್ರ ಶಶಿಹಿತ್ತಲ್ಲ, ಶ್ರೀಧರ ದೇವಾಡಿಗ, ಮಹಾದೇವ ದೇವಾಡಿಗ, ಶ್ರೀಧರ ಕುಮಟಾಕರ, ನಾಗರಾಜ ದೇವಾಡಿಗ ರಕ್ತ ನೀಡುವಲ್ಲಿ ಸಹಕರಿಸಿದ್ದಾರೆ.

error: