March 21, 2023

Bhavana Tv

Its Your Channel

ಹೆಲಿಕಾಪ್ಟರ್ ಮೂಲಕ ಮದ್ದು ಸಿಂಪಡನೆ ಮಾಡುತ್ತಾರೆಂದು ರಾತ್ರೋ ರಾತ್ರಿ ಬಾವಿಗೆ ತಾಡಪತ್ರೆ ಮುಚ್ಚಿದ ಸಾರ್ವಜನಿಕರು

ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ರವಿವಾರ ಜನತಾ ಕರ್ಪ್ಯೂಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದು. ಅಲ್ಲದೆ ಹೆಲಿಕಾಪ್ಟರ್ ಮೂಲಕ ಮುದ್ದು ಸಿಂಪಡನೆ ಮಾಡುತ್ತಾರೆ ಎಂದು ತಪ್ಪು ಭಾವಿಸಿ ಭಟ್ಕಳ ತಾಲೂಕಿನ ಸುತ್ತಮುತ್ತಲು ರಾತ್ರಿ ತಮ್ಮ ತಮ್ಮ ಬಾವಿಗಳಿಗೆ ಬೆಡ್ ಶೀಟ್, ತಾಡಪತ್ರದ ಮೂಲಕ ಬಾವಿ ಮುಚ್ಚಿರುವ ಘಟನೆ ಕಂಡು ಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನತಾ ಕರ್ಪ್ಯೂ ಘೋಷಣೆ ಮಾಡಿದಾಗಿಂದಲು ಕೆಲವು ಸಾರ್ವಜನಿಕರಲ್ಲಿ ತಪ್ಪು ಸಂದೇಶಗಳನ್ನು ರವಾನಿಸುತ್ತಿದ್ದು ಜನರಿಗೆ ತಪ್ಪು ಮಹಿತಿಯನ್ನು ನೀಡುತ್ತಿದ್ದಾರೆ, ಇದರ ಬಗ್ಗೆ ಅಧಿಕಾರಿಗಳೂ ಕ್ರಮ ತೆಗೆದು ಕೊಳ್ಳುವ ನಿರ್ದಾರ ಮಾಡಿದ್ದಾರೆ.

About Post Author

error: