April 24, 2024

Bhavana Tv

Its Your Channel

ಕುಮಟಾ ತಾಲ್ಲೂಕಿನಲ್ಲಿ “ಜನತಾ ಕರ್ಫ್ಯೂ”ವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಸರಕಾರಿ ಆಸ್ಪತ್ರೆಗೆ ಹೊರಓಗಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ.

ಕುಮಟಾ ಪಟ್ಟಣ ಸಂಪೂರ್ಣವಾಗಿ ಬಂದ್ ಆಗಿದ್ದ ಹಿನ್ನೆಲೆ ಸಾವ್ಜನಿಕರು ಸರಕಾರಿ ಆಸ್ಪತ್ರೆಗೂ ಬರದೆ ಕರ್ಫ್ಯೂನಲ್ಲಿ ಭಾಗಿಯಾಗಿದ್ದಾರೆ, ಕುಮಟಾದ ಸರಕಾರಿ ಆಸ್ಪತ್ರೆಯಲ್ಲಿ ಕೊರೊನ ಮುಂಜಾಗ್ರತ ಕ್ರಮವಾಗಿ ಉತ್ತಮ ರೀತಿಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಾಊ ವೈದ್ಯರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ಒಳಗಡೆ ಹಾಗೂ ಹೊರಗೆ ಬರುವಾಗ ಸೆನಿಟೈಸರ್ ಉಪಯೋಗಿಸಲು ಆಸ್ಪತ್ರೆಯ ಮುಖ್ಯದ್ವಾರದಲ್ಲಿಯೇ ಅಳವಡಿಸಲಾಗಿತ್ತು ಅಲ್ಲದೇ ಸಾರ್ವಜನಿಕರಿಗೆ ಆಸ್ಪತ್ರೆಯ ಯಾವುದೇ ಪೀಟೋಪಕರಣ ಅಥವಾ ಯಾವುದೇ ವಸ್ತುಗಳನ್ನು ಮುಟ್ಟದೆ ಇರಲು ಸಹ ಸೂಚಿಸಲಾಗಿತ್ತು, ಈ ಬಗ್ಗೆ ಆಸ್ಪತ್ರೆಯ ಮುಖ್ಯಾಧಿಕಾರಿಗಳಾದ ಡಾ|| ಶ್ರೀನಿವಾಸ ಮಾಧ್ಯಮದವರೊಂದಿಗೆ ಮಾತನಾಡಿ ಸಾರ್ವಜನಿಕರಿಗೆ ಮುಂಜಗ್ರತೆಯ ಬಗ್ಗೆ ವಿವಿರ ನೀಡಿದರು.

error: