
ಕಾರವಾರ: ಜಿಲ್ಲೆಯನ್ನು ಬಿಟ್ಟು ಬಿಡದ ಕರೋನಾ ಶನಿವಾರವು ಮುಂದುವರೆದಿದ್ದು, ಇಂದು ಎರಡು ಹೊಸ ಪ್ರಕರಣ ವರದಿಯಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ೨೦ ಸೋಂಕಿತರು ಕೊರೋನಾದಿಂದ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದರೆ, ಇತ್ತ ಮತ್ತಿಬ್ಬರಿಗೆ ಸೋಂಕು ದೃಢಪಡುವ ಸಾಧ್ಯತೆ ಇದೆ.
ಹೊನ್ನಾವರದಲ್ಲಿರುವ, ಸೋಂಕಿತ ಮುಂಬೈ ರಿಟರ್ನ್ ಪತಿಯ ಸಂಪರ್ಕದಲ್ಲಿದ್ದ ೩೪ ವರ್ಷದ ಪತ್ನಿಗೆ ಹಾಗೂ ದೆಹಲಿಯಿಂದ ಯಲ್ಲಾಪುರಕ್ಕೆ ವಾಪಸ್ಸಾಗಿದ್ದ ಯುವಕನಲ್ಲಿ ಸೋಂಕು ದೃಢಪಡುವ ಸಾಧ್ಯತೆ ಇದೆ. ಮಧ್ಯಾಹ್ನ ಬಿಡುಗಡೆಯಾಗುವ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಟಿಸಿದ ಬಳಿಕ ಖಚಿತವಾಗಬೇಕಿದೆ. ಒಂದುವೇಳೆ ಈ ಎರಡೂ ಪ್ರಕರಣಗಳು ಇಂದು ದೃಢಪಟ್ಟರೆ, ಹೊನ್ನಾವರದಲ್ಲಿ ಏಳು ಹಾಗೂ ಯಲ್ಲಾಪುರದಲ್ಲಿ ಮೂರಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಲಿದೆ. ಹೊನ್ನಾವರದಲ್ಲಿ ಇನ್ನು ಹಲವು ಕ್ವಾರಂಟೈನ್ ನಿವಾಸಿಗಳ ವರದಿಗಾಗಿ ತಾಲೂಕ ಆಡಳಿತ ಕಾಯುತ್ತಿದೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.