
ಹೊನ್ನಾವರ: ತಾಲೂಕಿನ ಮೂಡ್ಕಣಿಯ ವಿನಾಯಕ ನಾಯ್ಕ, ಯುವ ಸಂಘಟನೆಯ ಮೂಲಕ ಹಲವು ಸಮಾಜಮುಖಿ ಕಾರ್ಯ ಮಾಡುತ್ತಿದ್ದರು. ಶುಕ್ರವಾರ ತನ್ನ ಜನ್ಮದಿನದ ಅಂಗವಾಗಿ ಕರೊನಾ ಸಮಯದಲ್ಲಿ ಗ್ರಾಮದ ಆಶಾಕಾರ್ಯಕರ್ತೆಯರಿಗೆ ಮಾಸ್ಕ ಹಾಗೂ ಸ್ಯಾನಿಟೇಜರ್ ವಿತರಿಸುವ ಮೂಲಕ ಈ ವರ್ಷದ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಪ್ರತಿವರ್ಷವು ಜನ್ಮದಿನವನ್ನು ನೊಂದವರಿಗೆ ಅಸಹಾಯಕರಿಗೆ ನೆರವಾಗುವ ಮೂಲಕ ಆಚರಿಸಿಕೊಳ್ಳುವ ವಿನಾಯಕ ನಾಯ್ಕ ಪ್ರಸುತ್ತ ವರ್ಷ ಗ್ರಾಮದಲ್ಲಿ ಕರೊನಾ ವಾರಿಯರ್ಸಆಗಿರುವ ಆಶಾ ಕಾರ್ಯಕರ್ತೆಯರಿಗೆ ಸುರಕ್ಷಿತ ಪರಿಕರ ನೀಡಿರುವುದಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಅಲ್ಲದೇ ಕರೊನಾ ಸಮಯದಲ್ಲಿ ದೇಶಾದ್ಯಂತ ಲಾಕೌಡೌನ್ ಇರುದರಿಂದ ಪಟ್ಟಣಕ್ಕೆ ಔಷಧಿ ತೆಗೆದುಕೊಂಡು ಹೊಗಲು ಸಮಸ್ಯೆ ಉಂಟಾದಾಗ, ಗೇರುಸೊಪ್ಪ ಮಾರ್ಗದ ೫೦೦ಕ್ಕು ಹೆಚ್ಚಿನ ಮನೆಯವರಿಗೆ ಔಷಧಿಯನ್ನು ವಿತರಿಸಿದ್ದರು. ಅದರಲ್ಲಿ ನೂರಕ್ಕೂ ಅಧಿಕ ಬಡ ಜನತೆಯಿಂದ ಔಷಧಿಯನ್ನು ಉಚಿತವಾಗಿ ನೀಡುವ ಮೂಲಕ ಹಲವರಿಗೆ ಪ್ರೇರಣೆಯಾಗಿದ್ದರು.
ತಾಲೂಕಿನ ಯುವ ಒಕ್ಕೂಟದ ಮೂಲಕ ಯುವಕರಿಗೆ ಸದಾ ಕಾಲ ಪ್ರೇರಕರಾಗಿರುವ ಇವರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
More Stories
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಪ್ರಸಿದ್ಧ ವೈದ್ಯ ಡಾ. ವೆಂಕಟರಮಣ ಹೆಗಡೆ ಹಾಗೂ ಸಂಗೀತಾ ಹೆಗಡೆ ಅವರಿಗೆ ಹುಕ್ಕೇರಿ ಶ್ರೀಗಳಿಂದ ಗೌರವ.
ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇದ್ದಿಲ್ಲ. ಮಹೀಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವು ಇಟ್ಟು ನನಗೆ ಹಣ ತಂದುಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ನೂತನವಾಗಿ ನೇಮಕಗೊಂಡಿರುವ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು