April 20, 2024

Bhavana Tv

Its Your Channel

ಶನಿವಾರ ಕರೋನಾಕ್ಕೆ “ಶನಿ” ಕಾಟ : ರಾಜ್ಯದಲ್ಲಿಒಂದೇ ದಿನ ಮಧ್ಯಾಹ್ನದ ವೇಳೆಗೆ ದ್ವೀಶತಕದ ಗಡಿಗೆ ಬಂದು ತಲುಪಿದ ಕರೋನಾ ಸೊಂಕಿತರು.

ಕಾರವಾರ: ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶನಿವಾರ ನಿಜಕ್ಕೂ ಮಧ್ಯಾಹ್ನದ ಹೆಲ್ತ ಬುಲೆಟಿನ್‌ನಲ್ಲಿ ೧೩೮ ಮಂದಿಗೆ ಕೊವಿಡ್-೧೯ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೧೯೩೯ಕ್ಕೆ ಏರಿಕೆಯಾಗಿದೆ.
ಇಂದು ಜಿಲ್ಲೆಯ ಹೊನ್ನಾವರದಲ್ಲಿ ಒಂದು ಪ್ರಕರಣ ವರದಿಯಾಗಿದೆ. ಯಾದಗಿರಿಯಲ್ಲಿ ಒಂದೇ ದಿನ ಮಧ್ಯಾಹ್ನದ ವೇಳೆಗೆ ಅರ್ಧಶತಕ ದಾಟಿದ್ದು ೭೨ ಸೊಂಕು ಪತ್ತೆಯಾಗಿದೆ..
ಇಂದು ಬೆಂಗಳೂರು ಸಂಚಾರ ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲಿದ್ದು, ಪೊಲೀಸ್ ವಲಯದಲ್ಲಿ ಆತಂಕ ಮೂಡಿಸಿದೆ. ರಾಮಕೃಷ್ಣ ಹೆಗಡೆ ನಗರದ ನಿವಾಸಿಯಾಗಿರುವ ಕಾನ್‌ಸ್ಟೆಬಲ್, ಕೊರೊನಾ ಕರ್ತವ್ಯದಿಂದಾಗಿ ಕಳೆದ ತಿಂಗಳೇ ಕುಟುಂಬದವರನ್ನು ಊರಿಗೆ ಕಳುಹಿಸಿದ್ದರು. ಮೇ ೨೦ರಂದು ಇವರು ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದರು. ವರದಿಯಲ್ಲಿ ಇವರಿಗೆ ಸೋಂಕು ದೃಢಪಡುತ್ತಿದ್ದಂತೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗದಗ ೧೫, ಯಾದಗಿರಿ ೭೨, ಚಿಕ್ಕಮಂಗಳೂರು ೭, ಗುಲ್ಬರ್ಗಾ ೧, ರಾಯಚೂರು ೩೯, ದಕ್ಷಿಣ ಕನ್ನಡ ೩, ಹಾಸನ ೪, ಬೆಂಗಳೂರು ಗ್ರಾಮಂತರ ೪, ಮಂಡ್ಯ ೨೮, ದಾವಣಗೆರೆ ೩, ಕೋಲಾರ ೨, ಬೆಳಗಾವಿ ೧, ಚಿಕ್ಕಬಳ್ಳಾಪುರ ೧೩, ಉತ್ತರಕನ್ನಡ ೨, ಧಾರವಾಡ ಮತ್ತು ಉಡುಪಿ ತಲಾ ೧ ಪ್ರಕರಣ ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ದಾಖಲೆಯ ೧೯೬ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ೨೦ ಕರೋನಾ ಸೊಂಕಿತರು ಗುಣಮುಖರಾಗಿದ್ದು, ಎಲ್ಲರು ಭಟ್ಕಳ ತಾಲೂಕಿನವರಾಗಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಅವರನ್ನು ೩ ಅಂಬುಲೆನ್ಸ ಮೂಲಕ ಭಟ್ಕಳಕ್ಕೆ ಕಳುಹಿಸಿಕೊಡಲಾಗಿದೆ
ಇಂದಿನ ಸೋಂಕಿತರಲ್ಲಿ ಬಹುತೇಕರು ಮುಂಬೈನಿ0ದ ಆಗಮಿಸಿದವರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

error: