April 27, 2024

Bhavana Tv

Its Your Channel

ಫಾರ್ಮಹೌಸ್‌ನಲ್ಲಿದ್ದ ಸಿಮೆಂಟ್ ಶೀಟ್ ಮತ್ತು ಪಂಪಸೆಟ್ ಕದ್ದು ಪರಾರಿಯಾಗುತ್ತಿದ್ದ ಆರೋಪಿಗಳ ಬಂಧನ

ಭಟ್ಕಳ ತಾಲೂಕಿನ ಕಟಗಾರಕೊಪ್ಪದ ಬಳಿ ಹಂದಿ ಫಾರ್ಮಹೌಸ್‌ನಲ್ಲಿದ್ದ ಸಿಮೆಂಟ್ ಶೀಟ್ ಮತ್ತು ಪಂಪಸೆಟ್ ಕದ್ದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮುರ್ಡೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ರಾತ್ರಿ ನಡೆದಿದೆ.
ಚಿತ್ರಾಪುರದ ಆನಂದ ನಾರಾಯಣ ನಾಯ್ಕ ಹಾಗೂ ರಾಜೇಶ ಗಣೇಶ ಆಚಾರಿ ಆರೋಪಿಗಳು. ಗುರುವಾರ ಕಟಗಾರಕೊಪ್ಪದ ಗ್ರಾಮದ ತೆಕ್ಕಿನಗದ್ದೆಯ ಹಂದಿಫಾರ್ಮ ಹೌಸ್‌ಗೆ ನುಗ್ಗಿದ ಆರೋಪಿಗಳು ಮೊದಲು ೨೦ಸಾವಿರ ಮೌಲ್ಯದ ಸಿಮೆಂಟ್ ಶೀಟ್ ಹಾಗೂ ೧೦ಸಾವಿರ ಮೌಲ್ಯದ ಕಿರ್ಲೋಸ್ಟರ್ ಕಂಪನಿಯ ಪಂಪಸೆಟ್ ಕಳುವು ಮಾಡಿದ್ದರು. ನಂತರ ಮತ್ತುಳಿದ ೧೭ ಸಿಮೆಂಟ್ ಶೀಟ್ ಗಳನ್ನು ಕಳುವು ಮಾಡಿ ಆರೋಪಿತರು ವಾಹನದೊಂದಿಗೆ ಪರಾರಿ ಯಾಗಲ್ಲೂ ಯತ್ನಿಸು ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಡೇರಿಕ್ ಕ್ರಾಸ್ತಾ ತಂದೆ ವಿಲಿಯಂ ಕ್ರಾಸ್ತಾ ಕುಂದಾಪುರ ಇವರು ಮುರುಡೇಶ್ವರ ಪೋಲಿಸ್ ಠಾಣೆ ಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ರವೀಂದ್ರ ಎಂ ಬಿರಾದಾರ ತನಿಖೆ ನಡೆಸುತ್ತಿದ್ದಾರೆ.

error: