ಭಟ್ಕಳ ತಾಲೂಕಿನ ಕಟಗಾರಕೊಪ್ಪದ ಬಳಿ ಹಂದಿ ಫಾರ್ಮಹೌಸ್ನಲ್ಲಿದ್ದ ಸಿಮೆಂಟ್ ಶೀಟ್ ಮತ್ತು ಪಂಪಸೆಟ್ ಕದ್ದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮುರ್ಡೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ರಾತ್ರಿ ನಡೆದಿದೆ.
ಚಿತ್ರಾಪುರದ ಆನಂದ ನಾರಾಯಣ ನಾಯ್ಕ ಹಾಗೂ ರಾಜೇಶ ಗಣೇಶ ಆಚಾರಿ ಆರೋಪಿಗಳು. ಗುರುವಾರ ಕಟಗಾರಕೊಪ್ಪದ ಗ್ರಾಮದ ತೆಕ್ಕಿನಗದ್ದೆಯ ಹಂದಿಫಾರ್ಮ ಹೌಸ್ಗೆ ನುಗ್ಗಿದ ಆರೋಪಿಗಳು ಮೊದಲು ೨೦ಸಾವಿರ ಮೌಲ್ಯದ ಸಿಮೆಂಟ್ ಶೀಟ್ ಹಾಗೂ ೧೦ಸಾವಿರ ಮೌಲ್ಯದ ಕಿರ್ಲೋಸ್ಟರ್ ಕಂಪನಿಯ ಪಂಪಸೆಟ್ ಕಳುವು ಮಾಡಿದ್ದರು. ನಂತರ ಮತ್ತುಳಿದ ೧೭ ಸಿಮೆಂಟ್ ಶೀಟ್ ಗಳನ್ನು ಕಳುವು ಮಾಡಿ ಆರೋಪಿತರು ವಾಹನದೊಂದಿಗೆ ಪರಾರಿ ಯಾಗಲ್ಲೂ ಯತ್ನಿಸು ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಡೇರಿಕ್ ಕ್ರಾಸ್ತಾ ತಂದೆ ವಿಲಿಯಂ ಕ್ರಾಸ್ತಾ ಕುಂದಾಪುರ ಇವರು ಮುರುಡೇಶ್ವರ ಪೋಲಿಸ್ ಠಾಣೆ ಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ರವೀಂದ್ರ ಎಂ ಬಿರಾದಾರ ತನಿಖೆ ನಡೆಸುತ್ತಿದ್ದಾರೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.