May 19, 2024

Bhavana Tv

Its Your Channel

ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಶಾರ್ವರಿ ಸಂವತ್ಸರದ ಶ್ರಾವಣ ಮಾಸದ ಮೊದಲ ಸೋಮವಾರದ ಪೂಜೆ

ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಶಾರ್ವರಿ ಸಂವತ್ಸರದ ಶ್ರಾವಣ ಮಾಸದ ಮೊದಲ ಸೋಮವಾರದ ಪೂಜೆ ಶ್ರೀ ಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ “ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ” ಮಾರ್ಗದರ್ಶನದಂತೆ ನಡೆಯಿತು.

ಲೋಕಕಲ್ಯಾಣಾರ್ಥವಾಗಿ ಏಕಾದಶ ರುದ್ರಾಭಿಷೇಕ, ಸುವರ್ಣ ಶಂಖ ಗಂಗಾಜಲಾಭಿಷೇಕ, ಪಂಚಾಮೃತ ನವಧಾನ್ಯಭಿಷೇಕ ಗಳೊಂದಿಗೆ ವಿಶೇಷವಾಗಿ ನಡೆಯಿತು. ಆತ್ಮಲಿಂಗಕ್ಕೆ ನವರತ್ನ ಖಚಿತ ಸುವರ್ಣ ಕವಚ ತೊಡಿಸಿ ಬಿಲ್ವಾರ್ಚನೆ, ಸುವರ್ಣ ನಾಗಾಭರಣ ಅಲಂಕಾರದೊoದಿಗೆ, ವಿಶೇಷ ನೈವೇದ್ಯಗಳನ್ನು ಸಮರ್ಪಿಸಿ, ದೀಪಾರಾಧನೆ, ಮಹಾಮಂಗಳಾರತಿ ಜರುಗಿದವು. ಈ ದಿನ ಬ್ರಾಹ್ಮಿ ಮುಹೂರ್ತದಲ್ಲಿಯೇ ಪ್ರಾರಂಭಗೊoಡ ಈ ವಿಶೇಷ ಸೇವೆಗಳನ್ನು ವೇ||ಮೂ|| ಗಣಪತಿ ಉಪಾಧ್ಯರು ನೆರವೇರಿಸಿದರು.

ಭೂಖಂಡವನ್ನು ಹಿಂಸಿಸುತ್ತಿರುವ ಮಹಾವ್ಯಾಧಿಯಿಂದ ಸಕಲ ಜನ ಸಮುದಾಯವನ್ನು ಕಾಪಾಡಬೇಕೆಂದು ಜಗದೀಶ್ವರನ ಪದತಲಗಳಲ್ಲಿ ಶ್ರೀದೇವಾಲಯದ ಆಡಳಿತಾಧಿಕಾರಿ
ಶ್ರೀ ಜಿ. ಕೆ. ಹೆಗಡೆ ರವರು ಪ್ರಾರ್ಥನೆ ಮಾಡಿಕೊಂಡರು.

error: