ಭಟ್ಕಳ: ಅಕ್ರಮವಾಗಿ ಚಿನ್ನದ ಬಿಸ್ಕಿಟ್ ಸಾಗಾಟ ಮಾಡುತ್ತಿರುವರನ್ನು ಪತ್ತೆ ಹಚ್ಚುವಲ್ಲಿ ಭಟ್ಕಳ ನಗರ ಠಾಣಿಯ ಪೋಲಿಸರು ಯಶ್ವಸಿಯಾಗಿದ್ದು, ತಾಲೂಕಿನ ಹೂವಿನ ಚೌಕ ಕ್ರಾಸ ಹತ್ತಿರ ಬುಧವಾರದ ರಾತ್ರಿ ಚಿನ್ನದ ಬಿಸ್ಕೆಟ್ ಸಾಗಿಸಲು ಯತ್ನಿಸಿದ ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿತರಿಂದ ೬೦ ಲಕ್ಷ ರೂ. ಮೌಲ್ಯದ ೧ ಚಿನ್ನದ ಬಿಸ್ಕಿಟ್ ಹಾಗೂ ೮ ಚಿನ್ನ ಗಟ್ಟಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿತರಾದ ಶೈಲೇಶ ಮಾದೇವ ಪಾಟೀಲ ೩೩ ವರ್ಷ ಹುಬ್ಬಳ್ಳಿ,ದುರ್ಗದಬೈಲ್ ನಿವಾಸಿ ಇನ್ನೊಬ್ಬ ಆರೋಪಿ ವಿಪುಲ್ ಸಂಜಯ ದೇಶಮುಖ ೨೫ ವರ್ಷ ಮಹಾರಾಷ್ಟ್ರ ಹಾಲಿ ವಾಸ ಹುಬ್ಬಳ್ಳಿ ದುರ್ಗದಬೈಲ್ ಎಂದು ತಿಳಿದು ಬಂದಿದೆ.
ತನಿಖೆ ಮುಂದುವರೆದಿದ್ದು, ಆರೋಪಿತರು ಈ ವಸ್ತುಗಳನ್ನು ಕದ್ದು ತಂದಿರಬಹೆದೆoದು ಅಂದಾಜಿಸಲಾಗಿದ್ದು, ತನಿಖೆ ಬಳಿಕ ಸಂಪೂರ್ಣ ಮಾಹಿತಿ ತಿಳಿದು ಬರಲಿದೆ. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.